More

    ನಾರಾಯಣ ಹೃದಯಾಲಯದಲ್ಲಿ 100 ಹಾಸಿಗೆಯುಳ್ಳ ಕೋವಿಡ್​ ವಾರ್ಡ್​ ಉದ್ಘಾಟಿಸಿದ ಸೌರವ್ ಗಂಗೂಲಿ

    ಆನೇಕಲ್: ಬೊಮ್ಮಸಂದ್ರದ ನಾರಾಯಣ ಹೃದಯಾಲಯದಲ್ಲಿ ನೂರು ಐಸಿಯು ಬೆಡ್​ವುಳ್ಳ ಕೋವಿಡ್​ ವಾರ್ಡ್​ನ್ನು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಉದ್ಘಾಟಿಸಿದರು.

    ಡಾ.‌ ದೇವಿಶೆಟ್ಟಿ ಅವರ ಜತೆ ಬಹಳ ಹಿಂದಿನಿಂದಲೂ ಸ್ನೇಹ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.‌ದೇವಿಶೆಟ್ಟಿ ಅವರ ಕಾರ್ಯ ಶ್ಲಾಘನೀಯ. ಸಿನಿಮಾ‌ ನಟರೇ ಆಗರಲಿ, ಸ್ಪೋರ್ಟ್ ಪರ್ಸನ್ ಆಗಿರಲಿ, ಸಾಮಾನ್ಯ ಜನರೇ ಆಗಿರಲಿ, ಎಲ್ಲರಿಗೂ ಆರೋಗ್ಯ ಬೇಕು ಎಂದರು.

    ಎರಡು ವರ್ಷಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ಎರಡು ವರ್ಷದಲ್ಲಿ ಬೆಂಗಳೂರು 20 ವರ್ಷದಷ್ಟು ಬದಲಾಗಿದೆ. ಬೆಂಗಳೂರು ಒಂದು ಸುಂದರ ನಗರ ಎಂದು ಗಂಗೂಲಿ ಬಣ್ಣಿಸಿದರು.

    ನಾರಾಯಣ ಹೃದಯಾಲಯದಲ್ಲಿ 100 ಹಾಸಿಗೆಯುಳ್ಳ ಕೋವಿಡ್​ ವಾರ್ಡ್​ ಉದ್ಘಾಟಿಸಿದ ಸೌರವ್ ಗಂಗೂಲಿ

    ಕೋವಿಡ್​ ಮೂರನೇ ಅಲೆಗೆ ನಾವು ಬಂದು ನಿಂತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೋಂಕು ಕಾಣಿಸಬಹುದು. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಜತೆಗೆ ಮಾಸ್ಕ್, ಸ್ಯಾನಿಟೈಸರ್​ ಬಳಸಬೇಕು ಎಂದು ಡಾ. ದೇವಿಶೆಟ್ಟಿ ತಿಳಿಸಿದರು.

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಶಾಲೆಗಳಿಗೆ ಶಿಕ್ಷಕಿಯರೇ ಹಿಜಾಬ್​ ಧರಿಸಿ ಬಂದ್ರು! ಮಂಡ್ಯ, ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ಘಟನೆ

    ಸಾವಲ್ಲೂ ಸಾರ್ಥಕತೆ ಮೆರೆದ ಚೈತ್ರಾಗಿತ್ತು ಮಹತ್ತರ ಆಸೆ, ಆಕೆ ಬದುಕಿದ್ದರೆ ಸಂಚಲನ ಸೃಷ್ಟಿಸುತ್ತಿದ್ದಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts