More

    ಮೈಸೂರಲ್ಲಿ ಮತದಾರರಿಗೆ ಬೆಳ್ಳಿ ಕಾಯಿನ್ ಹಂಚಿಕೆ: ಧರ್ಮಸ್ಥಳ ಮಂಜುನಾಥಸ್ವಾಮಿ ಹೆಸರಲ್ಲಿ ಆಣೆ-ಪ್ರಮಾಣ

    ಮೈಸೂರು: ಕರೊನಾ, ಒಮಿಕ್ರಾನ್​ ಸೋಂಕಿನ ಭೀತಿ ನಡುವೆಯೂ ರಾಜ್ಯದಲ್ಲಿ ವಿಧಾನ ಪರಿಷತ್​ ಚುನಾವಣೆ ಕಾವೇರಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಝಣಝಣ ಕಾಂಚಾಣ ಸದ್ದು ಮಾಡುತ್ತಿದ್ದು, ವಿಭಿನ್ನ ರೀತಿಯ ಆಮಿಷವೊಡ್ಡುತ್ತಿದ್ದಾರೆ. ಮೈಸೂರಲ್ಲಿ ಚುನಾವಣೆಗೆ ಇನ್ನು ಒಂದು ವಾರ ಇರುವಾಗಲೇ ಮತದಾರರಿಗೆ ಜೆಡಿಎಸ್​ನಿಂದ ಬೆಳ್ಳಿ ಕಾಯಿನ್ ಹಂಚಿಕೆ ಮಾಡಲಾಗಿದೆ.

    ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಚಿತ್ರವುಳ್ಳ ಬೆಳ್ಳಿ ಕಾಯಿನ್​ಗಳನ್ನು ಮತದಾರರಿಗೆ ಕೊಟ್ಟು ಆಣೆ-ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆಯಂತೆ. ಬೆಳ್ಳಿ ಕಾಯಿನ್​ ಮೇಲೆ ‘ಓಂ ಶ್ರೀ ಮಂಜುನಾಥಾಯ ನಮಃ’ ಎಂಬ ಅಕ್ಷರದ ಜತೆಗೆ ಶ್ರೀಮಂಜುನಾಥ ಸ್ವಾಮಿಯ ಚಿತ್ರ ಇದೆ. ‘ದಿಗ್ವಿಜಯ ನ್ಯೂಸ್‌’ಗೆ ಬೆಳ್ಳಿ ಕಾಯಿನ್ ಫೋಟೋ ಲಭ್ಯವಾಗಿದೆ. . ಜೆಡಿಎಸ್ ಅಭ್ಯರ್ಥಿ ಹಲವೆಡೆ ಆಕ್ಷೇಪ ಶುರುವಾಗಿದೆ. ನಾಳೆ(ಶನಿವಾರ) ಎಚ್‌‌.ಡಿ‌.ಕುಮಾರಸ್ವಾಮಿ ಸಭೆಯಲ್ಲೂ ಬೆಳ್ಳಿ ಕಾಯಿನ್ ಹಂಚಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

    ‘ನಂದಿನಿ ಮೇಲಾಣೆ’ ನನ್ನ ವೋಟ್​ ನಿಮ್ಗೆ! ಪರಿಷತ್​ ಚುನಾವಣೆಯಲ್ಲಿ ಟ್ರೆಂಡ್​ ಆಯ್ತು ಈ ಆಣೆ, ಯಾರಿದು ನಂದಿನಿ?

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    https://www.vijayavani.net/nanjanagudu-naviluru-grama-eranna-case/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts