More

    ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಮೇಲೂ ದಾಖಲಾಗಿತ್ತು 4 ಪ್ರಕರಣ

    ಶಿವಮೊಗ್ಗ: ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಮೇಲೂ ನಗರದ ದೊಡ್ಡಪೇಟೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.

    ಬಜರಂಗ ದಳ, ವಿಶ್ವ ಹಿಂದೂಪರಿಷತ್ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ ಹರ್ಷ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ. ಜತೆಗೆ ಕೋಮುಭಾವನೆ ಕೆರಳಿಸುವಂತಹ ಪೋಸ್ಟ್‌ಗಳನ್ನು ಮಾಡುತ್ತಿದ್ದ. ಆರು ತಿಂಗಳ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧನಕ್ಕೆ ಒಳಪಟ್ಟಿದ್ದ. ಬಳಿಕ ಬಿಡುಗಡೆಗೊಳ್ಳುವಾಗ ದುಷ್ಕರ್ಮಿಗಳು ಕೊಲೆಗೆ ಸ್ಕೆಚ್ ಹಾಕಿದ್ದು, ಎಚ್ಚರಿಕೆಯಿಂದ ಇರುವಂತೆ ಪೊಲೀಸರೇ ಹರ್ಷನಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

    ಹಿಂದೂಪರ ಕಾರ್ಯಗಳ ಜತೆಗೆ ಗೋರಕ್ಷಣೆ ಕಾರ್ಯದಲ್ಲೂ ತೊಡಗಿಕೊಂಡಿದ್ದ. ಇಂಜಿನಿಯರ್‌ವೊಬ್ಬರ ಸಹಾಯಕವಾಗಿಯೂ ಕೆಲಸ ಮಾಡಿಕೊಂಡಿದ್ದ. ಹರ್ಷನ ತಂದೆ ನಾಗರಾಜ್ ಅವರು ಟೈಲರ್ ಆಗಿದ್ದಾರೆ.

    ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ: ಅಂತಿಮ ಯಾತ್ರೆ ವೇಳೆ ಬೈಕ್​ಗೆ ಬೆಂಕಿ, ಮನೆಗಳಿಗೆ ಕಲ್ಲು ತೂರಾಟ

    ಯುವಕನ ಸೊಂಟದ ಮೂಳೆ ಮುರಿದ ಮಹಿಳಾ ಪಿಎಸ್​ಐ! ಗುಬ್ಬಿ ತಾಲೂಕಲ್ಲಿ ಅಮಾನವೀಯ ಘಟನೆ

    ಸ್ನಾನಕ್ಕೆ ಹೋದ್ರೆ ಇಣುಕಿ ನೋಡ್ತಾನೆ, ಲೈಂಗಿಕತೆ​ಗಾಗಿ ಪೀಡಿಸ್ತಾನೆ… ಸೊಸೆಗೆ ಮಾವ ಕೊಟ್ಟ ಕಾಟ ಅಷ್ಟಿಷ್ಟಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts