More

    ಅಪ್ಪು ಪುಣ್ಯಸ್ಮರಣೆ: ಕಾವೇರಿ ನದಿ ತಡದಲ್ಲಿ ಪಿಂಡ ಪ್ರದಾನ ಮಾಡಿ ಪೂಜೆ ಸಲ್ಲಿಸಿದ ವಿನೋದ್​ರಾಜ್​

    ಮಂಡ್ಯ: ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ 11 ದಿನ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಪುನೀತ್​ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ 11ನೇ ದಿನ ಕಾರ್ಯ ನೆರವೇರಿಸಿದರು. ಸದಾಶಿವ ನಗರದಲ್ಲಿರುವ ಪುನೀತ್​ ನಿವಾಸದಲ್ಲೂ ಅಪ್ಪು ಭಾವಚಿತ್ರಕ್ಕೆ ಪೂಜೆ ಮಾಡಿ ಅವರ ಇಷ್ಟವಾದ ತಿಂಡಿ ಇಟ್ಟು ಪೂಜೆ ಮಾಡಲಾಗಿದೆ. ಅತ್ತ ಕಾವೇರಿ ನದಿ ತಡದಲ್ಲಿ ವಿನೋದ್ ರಾಜ್ ಅವರಿಂದ ಪಿಂಡ ಪ್ರದಾನ ಕಾರ್ಯ ನಡೆದಿದೆ.

    ಪುನೀತ್​ರ 11ನೇ ದಿನದ ಪುಣ್ಯಸ್ಮರಣೆ ಹಿನ್ನೆಲೆ ತಾಯಿ ಲೀಲಾವತಿ ಜತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಂಗಮಕ್ಕೆ ಬಂದ ವಿನೋದ್​ರಾಜ್​ ಅವರು ಪಿಂಡ ಪ್ರದಾನ ಮಾಡಿದರು. ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನೇವೇರಿಸಿ ಕಾವೇರಿ ನದಿಯಲ್ಲಿ ತರ್ಪಣ ಬಿಟ್ಟು ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು. ಸ್ಥಳೀಯ ವೈದಿಕರ ನೇತೃತ್ವದಲ್ಲಿ ಪುನೀತ್ ವೈದಿಕ ಕ್ರಿಯಾ ಅಪರ ಕರ್ಮದ ಕಾರ್ಯವನ್ನ ವಿನೋದ್ ರಾಜ್ ನೆರವೇರಿಸಿದರು.

    ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಪುನೀತ್​ ಸಾಯುತ್ತಿರಲಿಲ್ಲ… ಸ್ಲೋ ಪಾಯಿಸನ್​ ಕುರಿತು ಜನರಿಗೆ ಸತ್ಯ ತಿಳಿಸಿ…

    ಅಪ್ಪು ಸಾವು ನ್ಯಾಯವೇ? ದೇವಿಗೆ ಅಭಿಮಾನಿ ಬರೆದ ಈ ಪತ್ರ ಓದುತ್ತಿದ್ದರೆ ಕಣ್ಣೀರಿನ ಜತೆಗೆ ಸಿಟ್ಟು ಬರುತ್ತೆ…

    ಇಂದು 11ನೇ ದಿನದ ಪುಣ್ಯತಿಥಿ: ನೋವು ತುಂಬಿದ ಮನದಲ್ಲೇ ಪರೀಕ್ಷೆ ಬರೆಯಲು ಹೊರಟ ಪುನೀತ್​ರ ಕಿರಿ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts