ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 280 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬ್ರೇನ್ ರಿಸರ್ಚ್ ಸೆಂಟರ್ ಅನ್ನು ಉದ್ಘಾಟಿದರು. ಬಳಿಕ 425 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ಮೋದಿ ಅವರ ಮೊದಲ ಕಾರ್ಯಕ್ರಮ ಇದಾಗಿತ್ತು. ರಾಜ್ಯಪಾಲ ಥಾವರ್ಚಂದ್ ಗೆಹಲೋತ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದಾನಿಗಳಾದ ಕ್ರಿಸ್ ಗೋಪಾಲಕೃಷ್ಣನ್ ದಂಪತಿ ಹಾಗೂ ಬಾಗ್ಚಿ ಮತ್ತು ಪಾರ್ಥಸಾರಥಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಇನ್ಫೋಸಿಸ್ ಸಂಸ್ಥೆ ಸ್ಥಾಪಕರಲ್ಲೊಬ್ಬರಾದ ಕ್ರಿಸ್ ಗೋಪಾಲಕೃಷ್ಣ ಹಾಗೂ ಸುಧಾ ಗೋಪಾಲಕೃಷ್ಣನ್ ಅವರು ನೀಡಿದ 280 ಕೋಟಿ ರೂ. ದೇಣಿಗೆಯಿಂದ ಬ್ರೇನ್ ರಿಸರ್ಚ್ ಸೆಂಟರ್ ಅನ್ನು ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ಸಂಶೋಧನೆ ಮಿದುಳಿನ ಸಮಸ್ಯೆ ಕುರಿತು ನಡೆಯಲಿದೆ.
PM Narendra Modi inaugurates the Centre for Brain Research at the Indian Institute of Science in Bengaluru
Karnataka Governor Thaawarchand Gehlot
and CM Basavaraj Bommai also present pic.twitter.com/HtMFC2DPck— ANI (@ANI) June 20, 2022
ಮೈಸೂರಲ್ಲಿ ಪ್ರಧಾನಿ ಮೋದಿ ಜತೆ 45 ನಿಮಿಷ ಯೋಗ ಮಾಡಲಿದ್ದಾರೆ 15 ಸಾವಿರ ಜನ: 1200 ವಿದ್ಯಾರ್ಥಿಗಳೂ ಭಾಗಿ