ಬೆಳಗಾವಿ: ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಕೇಳುತ್ತಲೇ ಪತಿಯೂ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ್ ತಾಲೂಕಿನ ಕೊಳವಿ ಬಳಿ ನಡೆದಿದೆ.
ಲಕ್ಷ್ಮಣ್ ಹನುಮಂತಪ್ಪ ದ್ಯಾಮಣ್ಣವರ್ (27) ಮೃತ. ಲಕ್ಷ್ಮಣ್ ಅವರ ಪತ್ನಿ ನಿನ್ನೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸುದ್ದಿ ಕೇಳುತ್ತಲೇ ಲಕ್ಷ್ಮಣ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನ ಸಮೇತ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆಯಿಂದಲೂ ಪೊಲೀಸರು ಲಕ್ಷ್ಮಣ್ಗಾಗಿ ಹುಡುಕುತ್ತಿದ್ದರು. ಸಂಜೆ ಅಗ್ನಿಶಾಮಕದಳದವರು ಲಕ್ಷ್ಮಣ್ ಮೃತದೇಹ ಮತ್ತು ಕಾರನ್ನು ಕಾಲುವೆಯಿಂದ ಎತ್ತಿದ್ದಾರೆ. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.