More

    ನೀರಿನ ಸಮಸ್ಯೆ ಬಗೆಹರಿಸುವರೆಗೂ ಹನಿಮೂನ್​ಗೇ ಹೋಗಲ್ಲ ಎಂದು ಪಟ್ಟು ಹಿಡಿದ ನವದಂಪತಿ!

    ಕೋಲ್ಹಾಪುರ: ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಕಾಣಬಹುದು. ನೀರಿಗಾಗಿ ದಿನನಿತ್ಯ ಜಗಳಗಳೂ, ಪ್ರತಿಭಟನೆಗಳೂ ಕೂಡ ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ನವದಂಪತಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಡಬೇಕೆಂದು ತಮ್ಮ ಹನಿಮೂನ್​ ಅನ್ನೇ ತ್ಯಾಗ ಮಾಡಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ.

    ನಿನ್ನೆಯಷ್ಟೇ ಹೊಸಜೀವನಕ್ಕೆ ಕಾಲಿಟ್ಟ ಈ ದಂಪತಿಯನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ತಾವು ಮೆರವಣಿಗೆ ಹೊರಟಿದ್ದ ವಾಹನದ ಮೇಲೆ ನೀರಿನ ಸಮಸ್ಯೆ ಬಗೆಹರಿಸುವವರೆಗೂ ನಾವು ಹನಿಮೂನ್​ಗೆ ಹೋಗಲ್ಲ ಎಂದು ಬರೆಯಲಾಗಿತ್ತು.

    ಮದುವೆ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕ್ ಪಡೆಯಲಾಗಿದ್ದು, ನೀರಿನ ಸಮಸ್ಯೆ ಬಗೆಹರಿಸದ ಮಹಾನಗರ ಪಾಲಿಕೆ ವಿರುದ್ಧ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿನ ಪೇಟೆ ಬಡಾವಣೆಯಲ್ಲಿ ಕಳೆದ ಆರು ತಿಂಗಳಿನಿಂದ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ. ಇದರಿಂದ ಬೇಸತ್ತ ಈ ನವಜೋಡಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.

    ವಿಶಾಲ್​​ ಹಾಗೂ ಅಪರ್ಣಾ ಈ ನವದಂಪತಿ ಈಗ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ವಿಶಾಲ್​ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್​ ಕೊಡಿಸಬೇಕೆಂದು ಮಾಡಿದ್ದ ಮನವಿಯಂತೆ ಟ್ಯಾಂಕರ್​​ಅನ್ನು ಕೊಡಿಸಲಾಗಿತ್ತು. (ದಿಗ್ವಿಜಯ ನ್ಯೂಸ್​)

    ತಾಂತ್ರಿಕ ದೋಷದಿಂದ ಕಾವೇರಿ ನದಿಯ ನಡುವೆಯೇ ನಿಂತ ಬೋಟ್​! ಜನರ ಪರದಾಟ

    ಶ್ರೀಲಂಕಾ ಬಿಕ್ಕಟ್ಟು: ರಾಷ್ಟ್ರಪತಿ ನಿವಾಸದಲ್ಲಿರುವ ಸ್ವಿಮ್ಮಿಂಗ್​ಪೂಲ್​ನಲ್ಲೇ ಈಜಾಡುತ್ತಿರುವ ಪ್ರತಿಭಟನಾಕಾರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts