ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣ(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)ದಲ್ಲೇ ಮಸೀದಿ ತಲೆ ಎತ್ತಿದೆ. ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಂಬರ್ 5ರಲ್ಲಿ ಕೂಲಿ ಕಾರ್ಮಿಕರ ರೆಸ್ಟ್ ರೂಂ ಅನ್ನೇ ಪ್ರಾರ್ಥನೆ ಮಾಡಲು ಮಸೀದಿಯನ್ನಾಗಿ ಮಾರ್ಪಾಡು ಮಾಡಲಾಗಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದ ಕೂಲಿ ಕಾರ್ಮಿಕರ ರೆಸ್ಟ್ ರೂಂ ಅನ್ನೇ ಮಸೀದಿಯನ್ನಾಗಿ ಮಾರ್ಪಾಡಿಸಿದ್ದಾರೆ ಎಂದು ಮಲೆಯಾಳಂ ಭಾಷೆಯಲ್ಲಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಸರ್ಕಾರಿ ಕಚೇರಿಗಳು ಈ ರೀತಿಯಲ್ಲಿ ದುರ್ಬಳಕೆ ಆಗಬಾರದು. ರಾಜ್ಯದ ಅತ್ಯಂತ್ಯ ಪ್ರಮುಖ ರೈಲ್ವೆ ನಿಲ್ದಾಣದ ಕೂಲಿ ಕಾರ್ಮಿಕರ ರೂಂ ಅನ್ನೇ ಮಸೀದಿಯನ್ನಾಗಿ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಅಲ್ಲಿನ ಮುಖ್ಯಸ್ಥರಿಗೆ ತಿಳಿದಿಲ್ಲವೇ? ರೈಲ್ವೆ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ? ಕೇಂದ್ರ ರೈಲ್ವೆ ಸಚಿವರು ಮತ್ತು ಆರ್ಎಸ್ಎಸ್ ಮೂಲದವರೇ ಆದ ಗೃಹ ಸಚಿವರ ಗಮನಕ್ಕೆ ಇದು ಬಂದಿಲ್ಲವೇ? ಎಂದು ಹಿಂದು ಜನ ಜಾಗೃತಿ ವೇದಿಕೆ ರಾಜ್ಯ ವಕ್ತಾರ ಮೋಹನ್ ಗೌಡ ಪ್ರಶ್ನಿಸಿದ್ದಾರೆ.
ಮೆಜೆಸ್ಟಿಕ್ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್) ರೈಲ್ವೆ ನಿಲ್ದಾಣದಲ್ಲಿನ ಕಾರ್ಮಿಕರ ರೆಸ್ಟ್ ರೂಂ ನಲ್ಲಿ 35 ವರ್ಷದಿಂದ ಮುಸ್ಲಿಂ ಸಮುದಾಯದವರು ಪ್ರತಿದಿನ ಬೆಳಗ್ಗೆ 5 ಗಂಟೆಗೆ ನಮಾಜ್ ಮಾಡಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಶೇ.70 ಮುಸ್ಲಿಂ ಕೆಲಸಗಾರರು ಇದ್ದಾರೆ. ಮುಸ್ಲಿಂ ಸಮುದಾಯದವರಿಗೆಂದೇ ಈ ರೆಸ್ಟ್ ರೂಂ ಇದೆ ಎನ್ನಲಾಗಿದೆ.
ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ
ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಲ್ಲ… ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಸ್ವಾಮಿ ಆಕ್ರೋಶ