ನವದೆಹಲಿ: ಪ್ರತಿದಿನ ಒಂದಿಲ್ಲೊಂದು ವಿಷಯಕ್ಕೆ ಪತ್ನಿ ಜಗಳ ತೆಗೆಯುತ್ತಿದ್ದರಿಂದ ಬೇಸತ್ತ 32 ವರ್ಷದ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಲಾಕ್ಡೌನ್ನಿಂದಾಗಿ ನಿರ್ಜನವಾಗಿರುವ ಫ್ಲೈಒವರ್ ಮೇಲೆ ಹೋಗಿ ರಾತ್ರಿ 9 ಗಂಟೆಯಲ್ಲಿ ಸೇತುವೆಯ ತಡೆಗೋಡೆಯ ರೇಲಿಂಗ್ ಹಿಡಿದು ಜೋತುಬಿದ್ದ…. ಮುಂದೇನಾಯಿತು?
ಸರಿಯಾಗಿ ಅದೇ ಸಮಯಕ್ಕೆ ಬೈಕ್ ಪೆಟ್ರೋಲಿಂಗ್ ಮೇಲೆ ಬಂದ ಇಬ್ಬರು ಪೊಲೀಸರು ಫ್ಲೈಓವರ್ ತಡೆಗೋಡೆಯಿಂದ ಜೋತು ಬಿದ್ದಿದ್ದ ಈತನನ್ನು ಗಮನಿಸಿದರು. ತಕ್ಷಣವೇ ಹತ್ತಿರದಲ್ಲೇ ನಾಕಾಬಂದಿ ಕಾರ್ಯದಲ್ಲಿ ನಿರತರಾಗಿದ್ದ ತಮ್ಮ ಮೂವರು ಸಹೋದ್ಯೋಗಿಗಳನ್ನು ಫ್ಲೈಓವರ್ನ ಕೆಳಭಾಗಕ್ಕೆ ಕರೆಯಿಸಿಕೊಂಡರು.
ಹಾಗೆ ಬಂದ ಮೂವರು ಸಿಬ್ಬಂದಿ, ಅದೇ ಮಾರ್ಗದಲ್ಲಿ ಕಸ ತುಂಬಿಕೊಂಡು ಬಂದ ದೆಹಲಿ ಮುನ್ಸಿಪಲ್ ಟ್ರಕ್ ಅನ್ನು ವ್ಯಕ್ತಿ ಜೋತು ಬಿದ್ದಿದ್ದ ಸ್ಥಳದ ಕೆಳಗೆ ನಿಲ್ಲಿಸಿ, ಬಿದ್ದರೂ ಆತನ ಪ್ರಾಣಕ್ಕೆ ಅಪಾಯವಾಗದಂತೆ ಮುನ್ನೆಚ್ಚರಿಕೆ ಕೈಗೊಂಡರು.
ಬಳಿಕ ಫ್ಲೈಓವರ್ ಮೇಲಿದ್ದ ಇಬ್ಬರು ಪೊಲೀಸರು, ಜೋತು ಬಿದ್ದಿದ್ದ ವ್ಯಕ್ತಿಯ ಕೈಗಳನ್ನು ಹಿಡಿದು ಮೇಲೆತ್ತಿ ಆತನ ಪ್ರಾಣ ಕಾಪಾಡಿದರು. ನಂತರ ವಿಚಾರಿಸಿದಾಗ, ಜಗಳಗಂಟಿ ಪತ್ನಿಯ ವೃತ್ತಾಂತ ವಿವರಿಸಿದನಂತೆ.
ಇದಾಗಿದ್ದು ದೆಹಲಿಯಲ್ಲಿ. ಆದರೆ ಯಾವ ಫ್ಲೈಓವರ್ ಮೇಲೆ ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿಲ್ಲ.
ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಮೈದಾನದಲ್ಲಿ ಸಿಟ್ಟಾಗಿದ್ದರಂತೆ, ಅದೂ 20 ವರ್ಷಗಳ ಬಳಿಕ; ಏಕೆ ಗೊತ್ತಾ?