ಮುಂಬೈ: ವ್ಯಕ್ತಿಯೊಬ್ಬ ಮಹಾರಾಷ್ಟ್ರದ ನವಿ ಮುಂಬೈ ಹೊಟೇಲ್ನಲ್ಲಿ ಸುಮಾರು 8 ತಿಂಗಳುಗಳ ಕಾಲ ತಂಗಿದ್ದು, 25 ಲಕ್ಷ ರೂ. ಬಿಲ್ ಪಾವತಿ ಮಾಡದೆ ಪರಾರಿಯಾಗಿರುವ ಘಟನೆ ನಡೆದಿದೆ.
ಎಸ್ಕೇಪ್ ಆದವನು ಅಂಧೇರಿ ನಿವಾಸಿ ಮುರಳಿ ಕಾಮತ್ ಎಂದು ತಿಳಿದು ಬಂದಿದೆ. ಹೊಟೇಲ್ನವರು ಈತನ ವಿರುದ್ದ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಾಮತ್ ತಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಖಾರ್ಘರ್ ಪ್ರದೇಶದ ‘ಹೊಟೇಲ್ ತ್ರೀ-ಸ್ಟಾರ್’ ಸಿಬ್ಬಂದಿಗೆ ಹೇಳುವ ಮೂಲಕ ಎರಡು ಕೊಠಡಿಗಳನ್ನು ಬುಕ್ ಮಾಡಿದ್ದಾನೆ. ಅಲ್ಲದೇ ತನ್ನ 12 ವರ್ಷದ ಮಗನೊಂದಿಗೆ ನವೆಂಬರ್ 23 ರಿಂದ ಹೊಟೇಲ್ನಲ್ಲಿ ಉಳಿದುಕೊಂಡಿದ್ದಾನೆ.
ಕಳೆದ 8 ತಿಂಗಳ 25 ಲಕ್ಷ ರೂ. ಬಿಲ್ ನೀಡದೆ ತನ್ನ ಕೊಠಡಿ ಬಾತ್ರೂಂ ಕಿಟಕಿ ಹಾರಿ ಎಸ್ಕೇಪ್ ಆಗಿದ್ದಾನೆ. ಆತನ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಕೋಣೆಯಲ್ಲಿ ಬಿಟ್ಟಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಎರಡು ಬಾರಿ ಲಸಿಕೆ ಪಡೆದರೂ ಬಾಲಿವುಡ್ ಖ್ಯಾತ ನಿರ್ಮಾಪಕಿಗೆ ಕರೊನಾ…