ಯಾದಗಿರಿ: ಸಣ್ಣ ವಿಚಾರಕ್ಕೆ ಹೊಟ್ಟೆಗೆ ಚಾಕುವಿನಿಂದ ಇರಿದು ಅತ್ತೆಯನ್ನೇ ಕೊಂದಿರುವ ಘಟನೆ ಯಾದಗಿರಿ ನಗರದ ಚಟಾನ್ ಏರಿಯಾದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕೊಲೆಗೈದು ಪರಾರಿಯಅಗಿರುವ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಶೀದಾ (45) ಕೊಲೆಯಾದ ದುರ್ದೈವಿ. ಅಳಿಯ ರಫೀಕ್ ಭಾನುವಾರ ಬೆಳಗ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ಮಹಾರಾಷ್ಟ್ರದ ಮುಂಬೈ ಮೂಲದ ರಫೀಕ್, ಕಳೆದ 8 ವರ್ಷದ ಹಿಂದೆ ಕೊಲೆಯಾದ ರಶೀದಾ ಮಗಳನ್ನು ಮದುವೆಯಾಗಿದ್ದ. ಇಂದು ಬೆಳಗ್ಗೆ ಮುಂಬೈನಿಂದ ಬಂದಿದ್ದೇ ತಡ, ಅತ್ತೆಯೊಂದಿಗೆ ಜಗಳಕ್ಕೆ ನಿಂತಿದ್ದಾನೆ. ಈ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ಮುಂಬೈಯಲ್ಲಿ ಏನೂ ಕೆಲಸ ಮಾಡದ ಈತ ತನ್ನ ತವರುಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಹೆಂಡತಿಯನ್ನು ಪೀಡಿಸುತ್ತಿದ್ದ, ಈತನ ಕಾಟ ತಾಳಲಾರದೇ ಆಕೆ 20 ದಿನಗಳ ಹಿಂದಷ್ಟೇ ತನ್ನ ತಾಯಿ ಮನೆಗೆ ಬಂದಿದ್ದಾಳೆ. ಇಂದು ಬಂದ ಆರೋಪಿ ರಫೀಕ್ ಹೆಂಡತಿ ಸಮ್ರೀನಾಳನ್ನು ನನ್ನ ಜತೆ ಕಳುಹಿಸಿ, ಹಾಗೆ ಹಣ ನೀಡಬೇಕೆಂದು ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ರಶೀದಾಳನ್ನು ಕೊಲೆ ಮಾಡಿದ್ದಾನೆ. ಈ ಬಗ್ಗೆ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಪತ್ತೆ ಕಾರ್ಯ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಕಾರ್ಖಾನೆಯಲ್ಲಿ ಭೀಕರ ಸ್ಫೋಟ, 13 ಕಾರ್ಮಿಕರ ಸಾವು: ರಾಷ್ಟ್ರಪತಿ, ಪ್ರಧಾನಿಯಿಂದ ಸಂತಾಪ