More

    ಮನೆಗೆ ಹೋಗಲು ವಾಹನವಿಲ್ಲವೆಂದು ಬಸ್ಸನ್ನೇ ಕದ್ದ ಕಳ್ಳ: ಪ್ರಯಾಣಿಕರ ಬಳಿ ಕಂಡಕ್ಟರ್​ಗೆ ಹುಷಾರಿಲ್ಲ ನನಗೇ ದುಡ್ಡು ಕೊಡಿ ಎಂದ

    ವಿಕಾರಾಬಾದ್​: ತನ್ನ ಮನೆಗೆ ಹೋಗಲು ಬಸ್ಸಿಲ್ಲವೆಂಬ ಕಾರಣಕ್ಕೆ ಕಳ್ಳನೊಬ್ಬ ಸರ್ಕಾರಿ ಬಸ್ಸನ್ನೇ ಕದ್ದಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ.

    ಭಾನುವಾರ ರಾತ್ರಿ 9 ಗಂಟೆಗೆ ತಾಂಡೂರು ಡಿಪೋದಿಂದ ಓಗಿಪುರಕ್ಕೆ ಟಿಎಸ್​ಆರ್​ಟಿಸಿ ಬಸ್​ ಹೊರಟಿತ್ತು. ಆ ಊರಿಗೆ ಕೊನೆಯ ಬಸ್​ ಆಗಿದ್ದ ಅದರಲ್ಲಿ 15 ಜನ ಪ್ರಯಾಣಿಕರು ಕುಳಿತಿದ್ದರು. ಬಸ್ಸಿನ ಡ್ರೈವರ್​ ಮತ್ತು ಕಂಡಕ್ಟರ್​ ಊಟ ಮಾಡುವುದಕ್ಕೆಂದು ಹೋಟೆಲ್​ನಲ್ಲಿ ಕುಳಿತಿದ್ದರು. ಈ ಸಮಯಕ್ಕೆ ಬಸ್ಸಿನ ಡ್ರೈವರ್​ ಸೀಟನ್ನು ಹತ್ತಿದ ಕಳ್ಳ ಬಸ್ಸನ್ನು ಸ್ಟಾರ್ಟ್​ ಮಾಡಿ ಓಡಿಸಲಾರಂಭಿಸಿದ್ದಾನೆ. ಮೊದಲಿಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಆತ ಬಸ್ಸಿನ ಡ್ರೈವರ್​ ಅಲ್ಲ ಎನ್ನುವುದು ತಿಳಿದರಲಿಲ್ಲವಂತೆ. ಕಂಠ ಪೂರ್ತಿ ಕುಡಿದಿದ್ದ ಕಳ್ಳ ಬಸ್ಸನ್ನು ಹೇಗೆಂದರೇಗೆ ಓಡಿಸಲಾರಂಭಿಸಿದಾಗ ಪ್ರಯಾಣಿಕರು ಆತನನ್ನು ಕಂಡಕ್ಟರ್​ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಕಂಡಕ್ಟರ್​ಗೆ ಹುಷಾರಿಲ್ಲ. ನೀವು ನನಗೇ ಹಣ ನೀಡಿ ಎಂದು ಹೇಳಿದ್ದಾನೆ. ಅನುಮಾನ ಬಂದ ಪ್ರಯಾಣಿಕರು ಡಿಪೋ ಮ್ಯಾನೇಜರ್​ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ಇತ್ತ ಊಟ ಮುಗಿಸಿ ಬಂದ ಡ್ರೈವರ್​ ಮತ್ತು ಕಂಡಕ್ಟರ್​ ತಮ್ಮ ಬಸ್​ ಎಲ್ಲಿ ಎಂದು ಹುಡುಕಿದ್ದಾರೆ.

    ತನ್ನ ಊರಿಗೆ ಬಸ್ಸನ್ನು ತೆಗೆದುಕೊಂಡು ಹೋದ ಕಳ್ಳ ಬಸ್ಸಿಂದಿಳಿದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪ್ರಕಣವನ್ನು ದಾಖಲಿಸಿಕೊಂಡಿದ್ದು ಕಳ್ಳನನ್ನು ಗುರುತಿಸಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts