More

    ಕ್ವಾರಂಟೈನ್ ನಿಂದ ತಪ್ಪಿಸಿಕೊಂಡು ಬಂದು ಪತ್ನಿಯ ಕೈ ಕತ್ತರಿಸಿದ!

    ರಾಯ್ಪುರ: ಕರೊನಾ ಸೋಂಕಿನ ಕಾರಣ ಆತನನ್ನು ಆಸ್ಪತ್ರೆಯ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿತ್ತು. ಆದರೆರೆ ತನ್ನ ಪತ್ನಿಯ ಶೀಲ ಶಂಕಿಸಿದ ಆತ ಆಕೆಯ ಕೈಯನ್ನೇ ಕತ್ತರಿಸಿದ! ಅದು ಹೇಗೆ…?

    ಛತ್ತೀಸ್​ಗಢದ ಜಾಸ್​ಪುರ ಜಿಲ್ಲೆಯ ನಿವಾಸಿ ಲಲಿತ್​ ಕೋರ್ವಾ (25) ಎಂಬಾತನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಹತ್ತಿರದ ಆಸ್ಪತ್ರೆಯ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿತ್ತು.

    ಇದನ್ನೂ ಓದಿ: ಭಾರಿ ಹಿಮಪಾತಕ್ಕೆ ಇಬ್ಬರು ಭಾರತೀಯ ಯೋಧರು ಹುತಾತ್ಮ

    ಈತ ತನ್ನ ಪತ್ನಿ ಪಿಯಾರ್​ ಬಾಯ್​ ಮೊಬೈಲ್​ಫೋನ್​ಗೆ ಬುಧವಾರ ಕರೆ ಮಾಡಿದ್ದ. ಆದರೆ ಆಕೆಯ ಫೋನ್​ ಎಂಗೇಜ್​ ಆಗಿತ್ತು. ಇದರಿಂದ ಆತನಲ್ಲಿ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ಹಾಗಾಗಿ ಕೋಪಗೊಂಡಿದ್ದ ಆತ ಆಕೆಗೆ ಪಾಠ ಕಲಿಸಬೇಕು ಎಂದು ನಿಶ್ಚಿಯಿಸಿದ್ದ.
    ಅದರಂತೆ ಆತ ಗುರುವಾರ ಉಪಾಯವಾಗಿ ಕ್ವಾರಂಟೈನ್​ ಸೌಲಭ್ಯದಿಂದ ಹೊರಬಂದು ಕಾಂಪೌಂಡ್​ ಗೋಡೆ ಹಾರಿ ಮನೆಗೆ ತೆರಳಿದ್ದ. ಆಗಲೂ ಆತನ ಪತ್ನಿ ಈತ ಬಂದಿದ್ದನ್ನು ಗಮನಿಸದೆ ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತಿದ್ದಳು.

    ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಆತ ಕೈಗೆ ಸಿಕ್ಕ ಕೊಡಲಿಯಿಂದ ಆಕೆ ಫೋನ್​ ಹಿಡಿದುಕೊಂಡಿದ್ದ ಕೈಯನ್ನು ಕತ್ತರಿಸಿದ. ಆಕೆ ಕಿರುಚಿಕೊಂಡಾಗ ತಕ್ಷಣವೇ ಆತ ಅಲ್ಲಿಂದ ಪರಾರಿಯಾಗಿದ್ದ.

    ಇದನ್ನೂ ಓದಿ: 22 ಬಂಡುಕೋರರನ್ನು ಭಾರತಕ್ಕೆ ಹಸ್ತಾಂತರಿಸಿದ ಮ್ಯಾನ್ಮಾರ್​

    ಪಿಯಾರ್​ ಬಾಯಿ ಅವರ ಕಿರುಚಾಟ ಕೇಳಿಸಿಕೊಂಡ ನೆರೆಹೊರೆಯವರು ಆಕೆಯ ನೆರವಿಗೆ ಧಾವಿಸಿ, ಕಡಿದು ಹೋಗಿದ್ದ ಕೈಯೊಂದಿಗೆ ಆಸ್ಪತ್ರೆಗೆ ಕರೆದೊಯ್ದರು. ಆದರೂ, ಆಕೆಯ ಕೈಯನ್ನು ಮರುಜೋಡಿಸಲು ವೈದ್ಯರಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.

    ದೂರು ದಾಖಲಿಸಿಕೊಂಡ ಭಗಿಚಾ ಪೊಲೀಸ್​ ಠಾಣೆಯ ಪೊಲೀಸರು ಲಲಿತ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆತನನ್ನು ಮತ್ತೆ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಾತಾಡುವುದರಿಂದಲೂ ಹರಡುತ್ತಂತೆ ಕರೊನಾ: ಮುಚ್ಚಿದ ಪೆಟ್ಟಿಗೆಯಲ್ಲಿ ನಡೆಯಿತು ಸಂಶೋಧನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts