ರಾಯ್ಪುರ: ಕರೊನಾ ಸೋಂಕಿನ ಕಾರಣ ಆತನನ್ನು ಆಸ್ಪತ್ರೆಯ ಕ್ವಾರಂಟೈನ್ ಸೌಲಭ್ಯದಲ್ಲಿ ಇರಿಸಲಾಗಿತ್ತು. ಆದರೆರೆ ತನ್ನ ಪತ್ನಿಯ ಶೀಲ ಶಂಕಿಸಿದ ಆತ ಆಕೆಯ ಕೈಯನ್ನೇ ಕತ್ತರಿಸಿದ! ಅದು ಹೇಗೆ…?
ಛತ್ತೀಸ್ಗಢದ ಜಾಸ್ಪುರ ಜಿಲ್ಲೆಯ ನಿವಾಸಿ ಲಲಿತ್ ಕೋರ್ವಾ (25) ಎಂಬಾತನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಹತ್ತಿರದ ಆಸ್ಪತ್ರೆಯ ಕ್ವಾರಂಟೈನ್ ಸೌಲಭ್ಯದಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ: ಭಾರಿ ಹಿಮಪಾತಕ್ಕೆ ಇಬ್ಬರು ಭಾರತೀಯ ಯೋಧರು ಹುತಾತ್ಮ
ಈತ ತನ್ನ ಪತ್ನಿ ಪಿಯಾರ್ ಬಾಯ್ ಮೊಬೈಲ್ಫೋನ್ಗೆ ಬುಧವಾರ ಕರೆ ಮಾಡಿದ್ದ. ಆದರೆ ಆಕೆಯ ಫೋನ್ ಎಂಗೇಜ್ ಆಗಿತ್ತು. ಇದರಿಂದ ಆತನಲ್ಲಿ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ಹಾಗಾಗಿ ಕೋಪಗೊಂಡಿದ್ದ ಆತ ಆಕೆಗೆ ಪಾಠ ಕಲಿಸಬೇಕು ಎಂದು ನಿಶ್ಚಿಯಿಸಿದ್ದ.
ಅದರಂತೆ ಆತ ಗುರುವಾರ ಉಪಾಯವಾಗಿ ಕ್ವಾರಂಟೈನ್ ಸೌಲಭ್ಯದಿಂದ ಹೊರಬಂದು ಕಾಂಪೌಂಡ್ ಗೋಡೆ ಹಾರಿ ಮನೆಗೆ ತೆರಳಿದ್ದ. ಆಗಲೂ ಆತನ ಪತ್ನಿ ಈತ ಬಂದಿದ್ದನ್ನು ಗಮನಿಸದೆ ಮೊಬೈಲ್ಫೋನ್ನಲ್ಲಿ ಮಾತನಾಡುತ್ತಿದ್ದಳು.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಆತ ಕೈಗೆ ಸಿಕ್ಕ ಕೊಡಲಿಯಿಂದ ಆಕೆ ಫೋನ್ ಹಿಡಿದುಕೊಂಡಿದ್ದ ಕೈಯನ್ನು ಕತ್ತರಿಸಿದ. ಆಕೆ ಕಿರುಚಿಕೊಂಡಾಗ ತಕ್ಷಣವೇ ಆತ ಅಲ್ಲಿಂದ ಪರಾರಿಯಾಗಿದ್ದ.
ಇದನ್ನೂ ಓದಿ: 22 ಬಂಡುಕೋರರನ್ನು ಭಾರತಕ್ಕೆ ಹಸ್ತಾಂತರಿಸಿದ ಮ್ಯಾನ್ಮಾರ್
ಪಿಯಾರ್ ಬಾಯಿ ಅವರ ಕಿರುಚಾಟ ಕೇಳಿಸಿಕೊಂಡ ನೆರೆಹೊರೆಯವರು ಆಕೆಯ ನೆರವಿಗೆ ಧಾವಿಸಿ, ಕಡಿದು ಹೋಗಿದ್ದ ಕೈಯೊಂದಿಗೆ ಆಸ್ಪತ್ರೆಗೆ ಕರೆದೊಯ್ದರು. ಆದರೂ, ಆಕೆಯ ಕೈಯನ್ನು ಮರುಜೋಡಿಸಲು ವೈದ್ಯರಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ದೂರು ದಾಖಲಿಸಿಕೊಂಡ ಭಗಿಚಾ ಪೊಲೀಸ್ ಠಾಣೆಯ ಪೊಲೀಸರು ಲಲಿತ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆತನನ್ನು ಮತ್ತೆ ಕ್ವಾರಂಟೈನ್ ಸೌಲಭ್ಯದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾತಾಡುವುದರಿಂದಲೂ ಹರಡುತ್ತಂತೆ ಕರೊನಾ: ಮುಚ್ಚಿದ ಪೆಟ್ಟಿಗೆಯಲ್ಲಿ ನಡೆಯಿತು ಸಂಶೋಧನೆ!