ತುಮಕೂರು: ದೇವರ ಉತ್ಸವ ನೋಡುತ್ತಾ ನಿಂತಿದ್ದ ಜನರ ಮೇಲೆ ಆಟೋ ರೂಪದಲ್ಲಿ ಬಂದೆರಗಿದ ಜವರಾಯ ಓರ್ವನ ಪ್ರಾಣ ಹೊತ್ತೊಯ್ದಿದ್ದಾನೆ.
ಮಧುಗಿರಿ ತಾಲೂಕಿನ ಸಿದ್ದಾಪುರ ಗೇಟ್ ಬಳಿ ಶುಕ್ರವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಗಂಗಾಧರ್ (40) ಮೃತ ದುರ್ದೈವಿ. ಮಧುಗಿರಿ ಪಟ್ಟಣದ ಸಿದ್ದಾಪುರ ಗೇಟ್ ಬಳಿ ಮಣ್ಣಮ್ಮ ದೇವರ ಉತ್ಸವ ನಡೆಯುತ್ತಿತ್ತು. ಜನರೆಲ್ಲವರೂ ದೇವರ ಉತ್ಸವ ನೋಡುತ್ತಾ ನಿಂತಿದ್ದರು.
ಆ ವೇಳೆ ಶಿರಾ ಕಡೆಯಿಂದ ವೇಗವಾಗಿ ಬಂದ ಲಗೇಜ್ ಆಟೋ ಚಾಲಕನ ನಿಯಂತ್ರಣ ತಪ್ಪಿ ದೇವರ ಉತ್ಸವ ನೋಡುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಗಾಧರ್ ಮೃತಪಟ್ಟಿದ್ದು, ದೊಡ್ಡಮ್ಮ, ನರಸಮ್ಮ, ಕುಮಾರ್ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಆಟೋ ಚಾಲಕನನ್ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಲ್ಲಿ ಇಬ್ಬರು ಪ್ರೇಯಸಿಯರ ಕಣ್ಣೆದುರೇ ಪ್ರಿಯಕರ ಸಾವು! ನಿನ್ನೆ ಸಂಜೆ ನಡೆದೇ ಹೋಯ್ತು ಘೋರ ದುರಂತ
ತಂದೆ-ತಾಯಿ ಮೇಲಿನ ಕೋಪಕ್ಕೆ ರೇಷ್ಮೆಗೂಡಿಗೆ ವಿಷ ಹಾಕಿದ ಮಗಳು! ಕೋಲಾರದಲ್ಲಿ ಅಮಾನವೀಯ ಘಟನೆ