More

    ತಂದೆ-ತಾಯಿ ಮೇಲಿನ ಕೋಪಕ್ಕೆ ರೇಷ್ಮೆಗೂಡಿಗೆ ವಿಷ ಹಾಕಿದ ಮಗಳು! ಕೋಲಾರದಲ್ಲಿ ಅಮಾನವೀಯ ಘಟನೆ

    ಕೋಲಾರ: ಆಸ್ತಿ ನೀಡುತ್ತಿಲ್ಲ ಎಂದು ಸ್ವಂತ ಮಗಳೇ ಗಂಡ ಮತ್ತು ಮಗನೊಂದಿಗೆ ಸೇರಿಕೊಂಡು ತಂದೆ-ತಾಯಿಗೆ ಸೇರಿದ ರೇಷ್ಮೆಗೂಡಿನ ಮನೆಯಲ್ಲಿದ್ದ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿ ಹುಳುಗಳನ್ನು ಸಾಯಿಸಿದ್ದಾಳೆ.

    ಇಂತಹ ಅಮಾನವೀಯ ಘಟನೆ, ಕೋಲಾರ ತಾಲೂಕಿನ ಯಳಚೀಪುರದಲ್ಲಿ ನಡೆದಿದೆ. ಗ್ರಾಮದ ರಾಮಣ್ಣ ಮತ್ತು ಲಕ್ಷ್ಮಮ್ಮ ದಂಪತಿ ಜೀವನೋಪಾಯಕ್ಕಾಗಿ ರೇಷ್ಮೆ ಬೆಳೆಯುತ್ತಿದ್ದು ಮೊಟ್ಟೆ ಉತ್ಪಾದನೆಗಾಗಿ ಹುಳುಗಳಿಗೆ ಹಿಪ್ಪು ನೇರಳೆ ಸೊಪ್ಪು ನೀಡಿ ಆರೈಕೆ ಮಾಡುತ್ತಿದ್ದರು.

    ಜಮೀನು ನೀಡುತ್ತಿಲ್ಲವೆಂಬ ಹತಾಶೆಯಿಂದ ಮಗಳು ಚೌಡಮ್ಮ, ಅಳಿಯ ಲಕ್ಷ್ಮಣ್​ ಹಾಗೂ ಮೊಮ್ಮಗ ಆನಂದ ಸೇರಿ ಮೂವರು ಗುರುವಾರ ರಾತ್ರಿ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿದ್ದಾರೆ. ನೂರಾರು ಹುಳುಗಳು ಸತ್ತಿದ್ದು, ಸುಮಾರು 1 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ವೃದ್ಧ ದಂಪತಿ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

    ಬಿಎಸ್​ವೈ ಮೊಮ್ಮಗಳು ಡಾ.ಸೌಂದರ್ಯ ಸಾವಿಗೆ ಕಾರಣ ಇದೇನಾ?

    ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ: ಡಾ.ಸೌಂದರ್ಯ ಸಾವಿನ ಮನೆಯ ಕದ ತಟ್ಟಿದ ಆ ಕ್ಷಣ…

    ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts