More

    ಮಕ್ಕಳೊಂದಿಗೆ ಪತ್ನಿ ನಾಪತ್ತೆ: ಆಕೆ ಸಿಗುತ್ತಿದ್ದಂತೆ ಪೊಲೀಸರಿಗೆ ಕಾದಿತ್ತು ಶಾಕ್​! ಗಂಡ-ಹೆಂಡ್ತಿಯಲ್ಲ, ಆದ್ರೆ…

    ಮಂಗಳೂರು: ಅಶೋಕ ನಗರದಿಂದ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದ ಮಹಿಳೆ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ನನ್ನ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದ ವ್ಯಕ್ತಿಯು ಕಾಣೆಯಾಗಿದ್ದವಳ ಗಂಡನೇ ಅಲ್ಲ! ಈ ಸತ್ಯ ಸ್ಥಳೀಯರು ಮಾತ್ರವಲ್ಲ, ಪೊಲೀಸರಿಗೂ ಶಾಕ್ ನೀಡಿದೆ.

    ಅಶೋಕ ನಗರದಲ್ಲಿ ಕೆಲ ದಿನಗಳಿಂದ ರೇಣುಕಾ ಚೌವಡಾಳ(30) ಎಂಬಾಕೆ ನಾಗರಾಜನ ಜತೆ ತನ್ನಿಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಸೆ.18ರಂದು ಮನೆಯ ಸಾಮಗ್ರಿಯೊಂದಿಗೆ ರೇಣುಕಾ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದರು. ಈ ಸಂದರ್ಭ ನಾಗರಾಜ ಹಾಲಪ್ಪ ಊರಿಗೆ ಹೋಗಿದ್ದ. ಹಿಂತಿರುಗಿ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮನೆ ಮಾಲೀಕರಲ್ಲಿ ವಿಚಾರಿಸಿದಾಗ ಚಿಕ್ಕಮ್ಮನ ಮನೆಗೆ ಹೋಗುವುದಾಗು ರೇಣುಕಾ ಹೇಳಿದ್ದರು ಎಂದು ತಿಳಿಸಿದ್ದರು. ಎಲ್ಲ ಕಡೆ ಹುಡುಕಾಡಿದರೂ ಮಹಿಳೆ ಮತ್ತು ಮಕ್ಕಳು ಪತ್ತೆಯಾಗಲೇ ಇಲ್ಲ. ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ನಾಜರಾಜ ಉರ್ವ ಠಾಣೆಗೆ ದೂರು ನೀಡಿದ್ದ.

    ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ನಾಗರಾಜ ಹಾಲಪ್ಪ ರೇಣುಕಾಳ ಗಂಡನಲ್ಲ ಎಂಬುದು ಗೊತ್ತಾಗಿದೆ. ರೇಣುಕಾಳ ಪತಿ ಹಲವು ವರ್ಷದ ಹಿಂದೆ ನಿಧನ ಹೊಂದಿದ್ದಾರೆ. ಊರಿನವನೇ ಆದ ನಾಗರಾಜನ ಪರಿಚಯವಾಗಿ ರೇಣುಕಾ, ಆತನನ್ನು ಮದುವೆಯಾಗದೆ ಬದುಕು ಅರಸಿಕೊಂಡು ಮಂಗಳೂರಿಗೆ ಬಂದು ನೆಲೆಸಿದ್ದರು. ಮಕ್ಕಳು ಸೇರಿ ನಾಲ್ವರೂ ಒಟ್ಟಾಗಿ ಇದ್ದರು. ಆದರೆ ಸ್ಥಳೀಯರು ಅವರನ್ನ ದಂಪತಿ ಎಂದೇ ಭಾವಿಸಿದ್ದರು.

    ಇತ್ತೀಚೆಗೆ ನಾಗರಾಜ ಆಕೆಗೆ ವಿಪರೀತ ಹಿಂಸೆ ನೀಡಲಾರಂಭಿಸಿದ್ದ. ನಾಗರಾಜ ಊರಿಗೆ ತೆರಳಿದ್ದಾಗ ಸರಿಯಾದ ಸಮಯವೆಂದು ಮಕ್ಕಳ ಜತೆ ಆತನಿಗೆ ಗೊತ್ತಾಗದಂತೆ ರೇಣುಕಾ ತನ್ನ ಮನೆಗೆ ಹೋಗಿದ್ದಳು. ಪೊಲೀಸರು ಆಕೆಯನ್ನು ಹುಡುಕುತ್ತಾ ಹೋಗಿ ಗದಗದಲ್ಲಿ ಪತ್ತೆ ಮಾಡಿ, ಮಂಗಳೂರಿನಲ್ಲಿದ್ದ ಆತನನ್ನೂ ಕರೆಸಿ ವಿಚಾರಣೆ ನಡೆಸಿದಾಗ ಲಿವಿಂಗ್ ಟುಗೆದರ್ ವಿಚಾರ ಬಯಲಾಗಿದೆ.

    ರೇಣುಕಾಳೊಂದಿಗೆ ವಾಸ ಮಾಡುತ್ತೇನೆ ಎಂದು ನಾಗರಾಜ ಹೇಳಿದರೂ ಆತನೊಂದಿಗೆ ಬರಲು ಆಕೆ ಒಪ್ಪಿಲ್ಲ. ಎಷ್ಟೇ ಕಷ್ಟ ಆದರೂ ತಾನೊಬ್ಬಳೇ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತೇನೆ. ಆತನೊಂದಿಗೆ ವಾಸ ಮಾಡುವುದಿಲ್ಲ ಎಂದು ರೇಣುಕಾ ಹೇಳಿದ್ದರಿಂದ ಅವರಿಬ್ಬರನ್ನೂ ಪ್ರತ್ಯೇಕವಾಗಿರುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಟ್ಯೂಷನ್​ ಮುಗಿಸಿ ಮನೆಗೆ ಬಂದ ಬಾಲಕ ಚೀರಾಡುತ್ತಾ ಹೊರ ಓಡಿದ… ಒಳಹೊಕ್ಕ ಸ್ಥಳೀಯರಿಗೆ ಕಾದಿತ್ತು ಶಾಕ್​!

    ವಿದ್ಯಾರ್ಥಿಯ ತಾಯಿಯನ್ನ ಪೀಡಿಸಿ ತರಗತಿಯಲ್ಲೇ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕ!

    ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts