More

    ನಗರಸಭೆ ಸದಸ್ಯನ ಹತ್ಯೆ: ಭಕ್ತರ ಸೋಗಲ್ಲಿ ದೇಗುಲದ ಎದರೇ ಕೊಚ್ಚಿ ಕೊಲೆ, ಗ್ರಾಪಂ ಮಾಜಿ ಸದಸ್ಯೆ ಮೇಲೆ ಖಾಕಿ ಕಣ್ಣು

    ಮುಳಬಾಗಿಲು: 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮೂರೇ ದಿನಕ್ಕೆ ಕೋಲಾರ ಜಿಲ್ಲೆ ಮುಲಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್​ಮೋಹನ್​ರೆಡ್ಡಿ ದುರಂತ ಅಂತ್ಯ ಕಂಡಿದ್ದಾರೆ. ಮುತ್ಯಾಲಪೇಟೆ ಗಂಗಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಜಗನ್​ಮೋಹನರೆಡ್ಡಿ ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ದೇಗುಲದ ಎದುರೇ ಭಕ್ತರ ಸೋಗಲ್ಲಿ ಕಾಯುತ್ತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣ ಸಂಬಂಧ ಗ್ರಾಪಂ ಮಾಜಿ ಸದಸ್ಯೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರತಿದಿನವೂ ಮುತ್ಯಾಲಪೇಟೆಯ ಗಂಗಮ್ಮ ದೇಗುಲಕ್ಕೆ ಬರುತ್ತಿದ್ದ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಅವರ ಅಭಿಮಾನಿಯೂ ಆದ ಜಗನ್​ಮೋಹನ್​​ರೆಡ್ಡಿ, ದೇವಸ್ಥಾನದ ಬೀಗ ತೆಗೆದು ಪೂಜೆಗೆ ಸಿದ್ಧತೆ ಮಾಡಿಕೊಟ್ಟು ಮನೆಗೆ ತೆರಳುತ್ತಿದ್ದರು. ಈ ವಿಷಯ ತಿಳಿದಿದ್ದ ಹಂತಕರು ಭಕ್ತರ ಸೋಗಿನಲ್ಲಿ ಮಂಗಳವಾರ ಮುಂಜಾನೆ ದೇಗುಲದ ಬಾಗಿಲು ತೆರೆಯುವುದನ್ನೇ ಕಾಯುತ್ತಿರುವಂತೆ ನಿಂತಿದ್ದರು. ಎಂದಿನಂತೆ ಜಗನ್​ಮೋಹನ್​ರೆಡ್ಡಿ ಬೀಗ ತೆಗೆದು ಗಂಗಮ್ಮ ದೇವಿ ದರ್ಶನ ಪಡೆದರು. ದೇಗುಲದಿಂದ ಹೊರಬರುತ್ತಿದ್ದಂತೆ ಸುತ್ತುವರಿದ ಹಂತಕರ ಪೈಕಿ ಇಬ್ಬರು ಚೂರಿಯಿಂದ ಇರಿದಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಇನ್ನೂ ಮೂವರು ಹಂತಕರು ಮಚ್ಚಿನಿಂದ ಮನಸೋಯಿಚ್ಛೆ ಹಲ್ಲೆ ಮಾಡಿ ಕೈಗಳನ್ನು ಕತ್ತರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗನ್​ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರಾದರೂ ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು.

    ರೌಡಿಶೀಟರ್​ ಆಗಿದ್ದವರಿಗೆ ಕ್ಲೀನ್​ ಚಿಟ್​: ಎಸ್​.ವಡ್ಡಹಳ್ಳಿಯಲ್ಲಿ 2000ನೇ ಸಾಲಿನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಆಗಿನ ಪಿಎಸ್​ಐ ಬಿ.ಜಗನ್ನಾಥ ರೈ ಅವರು ಜಗನ್​ಮೋಹನ್​ರೆಡ್ಡಿ ವಿರುದ್ಧ ರೌಡಿಶೀಟ್​ ತೆರೆದಿದ್ದರು. 2014ರಲ್ಲಿ ಆಗಿನ ಎಸ್​ಪಿ ಇದನ್ನು ರದ್ದುಗೊಳಿಸಿ ಕ್ಲೀನ್​ಚಿಟ್​ ನೀಡಿದ್ದರು.

    ಮೂರು ದಿನಗಳ ಹಿಂದಷ್ಟೇ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರೆಡ್ಡಿಗೆ ಪತ್ನಿ ರೂಪಾ, ಪುತ್ರ, ಪುತ್ರಿ ಇದ್ದಾರೆ. ಮೃತರ ಪತ್ನಿ ನಿರುಪಮಾ ನೀಡಿದ ದೂರಿನ ಮೇರೆಗೆ ಮುಳಬಾಗಿಲು ನಗರ ಠಾಣೆಯಲ್ಲಿ ಜಗನ್ನಾಥ, ಧನುಷ್​ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಕಾಂತರಾಜ ಸರ್ಕಲ್​ ಬಳಿಯ ತೋಟದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

    ಗ್ರಾಪಂ ಮಾಜಿ ಸದಸ್ಯೆ ವಶಕ್ಕೆ: ನಂಗಲಿ ಸಮೀಪದ ತೊಂಡಹಳ್ಳಿಯಲ್ಲಿದ್ದ ಸಾವಿತ್ರಮ್ಮ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಕೆ ಹನುಮನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊತ್ತಮಂಗಲ ಕ್ಷೇತ್ರದ ಮಾಜಿ ಸದಸ್ಯೆ. 2018ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಈಕೆಯ ಪುತ್ರರಿಗೂ ಜಗನ್​ಮೋಹನ್​ ರೆಡ್ಡಿಗೂ ಜಗಳವಾಗಿತ್ತು. ಇದರಿಂದ ವೈಷಮ್ಯ ಬೆಳೆದಿತ್ತು. ಈ ಆಯಾಮದಲ್ಲೂ ತನಿಖೆ ಆರಂಭಿಸಿರುವ ಪೊಲೀಸರು, ರೆಡ್ಡಿ ಜತೆ ಹಳೇ ದ್ವೇಷ ಹೊಂದಿದ್ದ ಆರೋಪಿಗಳ ಚಲನವಲನಗಳ ಮೇಲೂ ನಿಗಾ ಇಟ್ಟಿದ್ದಾರೆ.

    ಸತ್ತ ಗಂಡ ಹಾವಿನ ರೂಪದಲ್ಲಿ ಮನೆಗೆ ಬಂದನೇ..? ಬಾಗಲಕೋಟೆಯಲ್ಲಿ ಹಾವಿನ ಜತೆ 4 ದಿನ ವಾಸವಿದ್ದ ಅಜ್ಜಿ!

    ಸಿಂದಗಿಯಲ್ಲಿ ಮಟಮಟ ಮಧ್ಯಾಹ್ನವೇ ಅಕ್ಕ-ತಮ್ಮನ ಭೀಕರ ಹತ್ಯೆ! ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಗಂಡ

    ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts