ಕೋಲಾರ: ಸಾವಿರ ಕೋಟಿ ಆಸ್ತಿ ಒಡೆಯ ಕೆಜಿಎಫ್ ಬಾಬು ಕೊಟ್ಟಿದ್ದ ಚೆಕ್ಗಳು ಬೌನ್ಸ್ ಆಗಿದ್ದು, ಈ ಚೆಕ್ ಪಡೆದಿದ್ದ ಮಕ್ಕಳಿಗೆ ಸಂಕಷ್ಟ ಎದುರಾಗಿದೆ.
ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೆಜಿಎಫ್ ಬಾಬು 2021ರ ಸೆಪ್ಟೆಂಬರ್ ಕೊನೇ ವಾರದಲ್ಲಿ 250ರಿಂದ 450 ವಿದ್ಯಾರ್ಥಿಗಳಿಗೆ ತಲಾ 500 ರೂ.ಗಳ ಚೆಕ್ ವಿತರಣೆ ಮಾಡಿದ್ದರು. ಅವೆಲ್ಲವೂ ಈಗ ಬೌನ್ಸ್ ಆಗಿವೆ. ಹಾಗಾಗಿ ಬ್ಯಾಂಕ್ನವರು ಮಕ್ಕಳ ಖಾತೆಯಿಂದ ರಿಟರ್ನ್ 590 ರೂಪಾಯಿ ಕಟ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಣೆ ಮಾಡಿದರೆ ಚೆಕ್ ಬೌನ್ಸ್ ಆಗಿದೆ. ಅದಕ್ಕೆ ರಿಟರ್ನ್ ಚೆಕ್ ಬೌನ್ಸ್ ಆಗಿ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರಿಗೆ ದೂರು ಕೊಡಲು ಹೋದರೆ, ಮಧ್ಯವರ್ತಿಗಳು ದೂರು ನೀಡಬೇಡಿ ಎಂದು ಬೆದರಿಕೆ ಒಡ್ಡಿದ್ದಾರೆ. ಶಾಲೆಯ ಸಿಬ್ಬಂದಿಯನ್ನು ಕೇಳಿದರೆ, ಕೆಜಿಎಫ್ ಬಾಬು ಅವರಿಗೆ ತಿಳಿಸಿದ್ದು, ಹಣ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮ ಅಕೌಂಟ್ನಿಂದ 590 ರೂ. ಕಟ್ಟಾಗಿದೆ. ನಮಗೆ ಹೆಚ್ಚುವರಿ ಹಣ ನೀಡಬೇಕೆಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಕೆಜಿಎಫ್ ಬಾಬು ಅವರು ಚೆಕ್ ನೀಡಿದ್ದರಿಂದ ನಮಗೆ ಸಾಲದ ಹೊರೆಯಾಗಿದೆ ಎಂದು ವಿದ್ಯಾರ್ಥಿನಿ ಲಕ್ಷ್ಮಮ್ಮ ಅಳಲುತೋಡಿಕೊಂಡಿದ್ದಾರೆ.
ಕೆಜಿಎಫ್ ಬಾಬು ಅವರು ಮಕ್ಕಳಿಗೆ ನೀಡಿದ್ದ ಎಲ್ಲ ಚೆಕ್ಗಳು ಬೌನ್ಸ್ ಆಗಿವೆ. ಮಕ್ಕಳಿಗೆ ಮೋಸ ಮಾಡಿದ್ದರಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಎಸ್ಡಿಎಂಸಿ ಅಧ್ಯಕ್ಷ ಆಂಜನೇಯಪ್ಪ ತಿಳಿಸಿದ್ದಾರೆ.
ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್ನಲ್ಲಿ ಅಮಾನುಷ ಘಟನೆ
ಆಸ್ತಿ ಬರೆಸಿಕೊಂಡು ತಂದೆ-ತಾಯಿಯನ್ನ ಬೀದಿಗೆ ತಳ್ಳಿದ್ದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ ಕಂದಾಯ ಇಲಾಖೆ!