ಉಪ್ಪಿನಬೆಟಗೇರಿ: ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮರವೊಂದು ಉರುಳಿ ಬಿದ್ದಿದೆ.
ಗ್ರಾಮದ ಬಸ್ ನಿಲ್ದಾಣ ಹತ್ತಿರದ ಅಂಚೆ ಕಚೇರಿಯ ಕಾಂಪೌಂಡ್ಗೆ ಹೊಂದಿಕೊಂದಿದ್ದ ಮರ ಬಿದ್ದಿದ್ದರಿಂದ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ದರಿಂದ ಜನ ಭಯದಿಂದ ಅದರ ಬಳಿ ಸುಳಿಯಲಿಲ್ಲ. ಕೂಡಲೇ ಹೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.