ಶಿವಮೊಗ್ಗ: ನಿನ್ನ ಬೆತ್ತಲೆ ವಿಡಿಯೋವನ್ನು ಸ್ನ್ಯಾಪ್ಚಾಟ್ ಆ್ಯಪ್ಗೆ ಹಾಕು ಎಂದು ಪತ್ನಿಗೆ ಪದೇಪದೆ ಹಿಂಸಿಸುತ್ತಿದ್ದ ಗಂಡ, ಅಪ್ಲೋಡ್ ಮಾಡಿದಿದ್ದರೆ ತನ್ನ ಮೊಬೈಲ್ನಲ್ಲಿರುವ ಬೆತ್ತಲೆ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಆಕೆಗೆ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ…
ನನ್ನ ಬೆತ್ತಲೆ ವಿಡಿಯೋವನ್ನು ಬೇರೆಯವರಿಗೆ ಕಳಿಸುವಂತೆ ಗಂಡನೇ ಪೀಡಿಸುತ್ತಿದ್ದಾನೆ ಎಂದು ನೊಂದ ಪತ್ನಿ ನಾಲ್ವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಂತಹ ಘಟನೆ ಹೊಸನಗರದಲ್ಲಿ ಸಂಭವಿಸಿದ್ದು, ರಿಪ್ಪನ್ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಸನಗರ ತಾಲೂಕಿನ ಹುಂಚ ಹೋಬಳಿಯ ಗ್ರಾಮವೊಂದರ ಯುವತಿಗೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ವೆಲ್ಕಮ್ ಗೇಟ್ನ ಸಲ್ಮಾನ್ ಎಂಬಾತನ ಜತೆ 2021ರ ಮೇ 22ರಂದು ಮದುವೆ ನಡೆದಿತ್ತು. ಮದುವೆ ಸಂದರ್ಭದಲ್ಲಿ 90 ಗ್ರಾಂ ಬಂಗಾರ, 3 ಲಕ್ಷ ರೂ. ವರದಕ್ಷಿಣೆ ನೀಡಲು ಯುವತಿಯ ತಂದೆ ಒಪ್ಪಿದ್ದರು. ಮದುವೆಗೆ ಮುಂಚೆ 2 ಲಕ್ಷ ರೂ. ನಗದು, 4 ಗ್ರಾಂನ ಉಂಗುರ ಹಾಗೂ ಮದುವೆ ಬಳಿಕ 90 ಗ್ರಾಂ ಬಂಗಾರ, ಗೃಹೋಪಯೋಗಿ ವಸ್ತುಗಳನ್ನು ನೀಡಿದ್ದರು. ಆದರೆ ಬಾಕಿ ಒಂದು ಲಕ್ಷ ರೂ. ವರದಕ್ಷಿಣೆ ನೀಡಿರಲಿಲ್ಲ.
ಹಲವು ತಿಂಗಳ ಬಳಿಕ ಅತ್ತೆ ಸಾಹೀರಾ ಮತ್ತು ಮಾವ ಶೌಕತ್ ಖಾನ್ ವರದಕ್ಷಿಣೆ ತರುವಂತೆ ಸೊಸೆಗೆ ಕಿರುಕುಳ ನೀಡಲಾರಂಭಿಸಿದ್ದರು. ಅದಕ್ಕೆ ಪತಿ ಸಲ್ಮಾನ್ ಕುಮ್ಮಕ್ಕು ನೀಡುತ್ತಿದ್ದ. ಈ ನಡುವೆ ಕಿಗ್ಗಾದಲ್ಲಿರುವ ನಾದಿನಿ ಸಮೀನಾ ಕೂಡ ಕಿರುಕುಳ ನೀಡುತ್ತಿದ್ದರು. ಪತ್ನಿಯ ಬೆತ್ತಲೆ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆಹಿಡಿದುಕೊಂಡು ಗಂಡ ವರದಕ್ಷಿಣೆ ತರುವಂತೆ ಬೆದರಿಕೆ ಹಾಕುತ್ತಿದ್ದ. ಬೆತ್ತಲೆ ವಿಡಿಯೋವನ್ನು ಸ್ನ್ಯಾಪ್ಚಾಟ್ ಆ್ಯಪ್ಗೆ ಹಾಕುವಂತೆ ಪದೇಪದೆ ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಅಪ್ಲೋಡ್ ಮಾಡಿದಿದ್ದರೆ ತನ್ನ ಮೊಬೈಲ್ನಲ್ಲಿರುವ ಬೆತ್ತಲೆ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ.
ಕಿರುಕುಳ ತಾಳಲಾರದೇ ಸಂತ್ರಸ್ತೆ ಇತ್ತೀಚೆಗೆ ತವರು ಮನೆಗೆ ಬಂದಿದ್ದರು. ಅಲ್ಲಿಗೂ ಬಂದಿದ್ದ ಸಲ್ಮಾನ್ ಪತ್ನಿಗೆ ತಲಾಖ್ ಕೂಡ ನೀಡಿ ಮರಳಿದ್ದ. ಈ ನಡುವೆ ಸಂತ್ರಸ್ತೆಗೆ ಮತ್ತೆ ಕರೆ ಮಾಡಿದ್ದ ಆತ ಬೆತ್ತಲೆ ವಿಡಿಯೋವನ್ನು ಸ್ನ್ಯಾಪ್ಚಾಟ್ಗೆ ಅಪ್ಲೋಡ್ ಮಾಡಬೇಕು. ವರದಕ್ಷಿಣೆ ತರಬೇಕು. ಇಲ್ಲದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾಳಿ ಮಠದ ಸ್ವಾಮೀಜಿ ಬಂಧನ: ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ತೀವಿ… ನನ್ನ ಹೇಳಿಕೆಗೆ ಈಗಲೂ ಬದ್ಧ…
ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್ ನೀವೆಲ್ಲ ನನಗೊಂದು ಸಹಾಯ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ