ಹಾವೇರಿ: ಹಾನಗಲ್ ವಿಧಾನಸಭಾ ಉಪ ಚುನಾವಣೆ ಸಮರ ಕಾವೇರಿದ್ದು, ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, 19 ಅಂಶಗಳ ಪ್ರಣಾಳಿಕೆಯನ್ನ ಶನಿವಾರ ಬಿಡುಗಡೆ ಮಾಡಿದೆ. ಅಭ್ಯರ್ಥಿ ಶಿವರಾಜ್ ಸಜ್ಜನರ್ ನಿವಾಸದಲ್ಲಿ ಪ್ರಣಾಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಬಿಡುಗಡೆ ಮಾಡಿದರು.
- ಹಾನಗಲ್ ಪಟ್ಟಣದ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಘಡಕ ಆಧುನೀಕರಣ. ಪ್ರತಿ ಮನೆಯಿಂದಲೂ ಒಣ ಮತ್ತು ಹಸಿ ಕಸ ಸಂಗ್ರಹ
- ಪಟ್ಟಣದ ಎಲ್ಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯಕ್ಕೆ ಕ್ರಮ
- ಆಟದ ಮೈದಾನಗಳಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ
- ಪಟ್ಟಣದ ಈಜುಕೊಳಗಳ ನವೀಕರಣ, ಸುಸಜ್ಜಿತ ಈಜುಕೊಳಗಳ ನಿರ್ಮಾಣ
- ಪಟ್ಟಣದ ಹೊರವಲಯದಲ್ಲಿ ಬಸ್ ತಂಗುದಾಣ ಮತ್ತು ಟ್ರಕ್ ಟರ್ಮಿನಲ್
- ಔಷಧ ಮಳಿಗೆಗಳಲ್ಲಿ ಎಲ್ಲ ಬಗೆಯ ಔಷಧಗಳ ಮಾರಾಟಕ್ಕೆ ಕ್ರಮ. ಹೊಸ ಜನೌಷಧ ಮಳಿಗೆಗಳ ಸ್ಥಾಪನೆ
- ಪಟ್ಟಣದಲ್ಲಿ ಸಿಸಿಟಿವಿಗಳ ಅಳವಡಿಕೆ ಮತ್ತು ಪೊಲೀಸ್ ಗಸ್ತು ಸೌಕರ್ಯ
- ಪ್ರಮುಖ ಸಂಚಾರಿ ರಸ್ತೆಗಳ ಅಭಿವೃದ್ಧಿ, ಪಾದಚಾರಿ ರಸ್ತೆಗಳ ಅಭಿವೃದ್ಧಿ ಸೇರಿ ಒಟ್ಟು 19 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಹಿರಿಯ ವಕೀಲನಿಂದ ಲೈಂಗಿಕ ಕಿರುಕುಳ: ಪ್ರಕರಣ ತಿರುಚಲು ಹೋಗಿ ಸಿಕ್ಕಿಬಿದ್ದ ಮಹಿಳೆ
ಹುಕ್ಕೇರಿಯಲ್ಲಿ ಘೋರ ದುರಂತ: ನಾಲ್ವರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ! ಬೆಚ್ಚಿಬೀಳಿಸುತ್ತೆ ಕಾರಣ
ನನ್ನನ್ನು ಸಾಯಿಸಿ ಬಿಡ್ತಾರೆ ಬೇಗ ಬಾ.. ಎಂದು ಕಣ್ಣೀರಿಟ್ಟ ಪ್ರಿಯಕರ, ಆಕೆ ಬರುವಷ್ಟರಲ್ಲಿ ಶವವೂ ಇರಲಿಲ್ಲ…