ಬೆಂಗಳೂರು: ‘ಕರಿಯ’, ‘ಕರಿಯ 2’ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ (58) ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
ಭಾನುವಾರ ಬೆಳಗ್ಗೆ 8 ಗಂಟೆಗೆ ಪುಟ್ಟೇನಹಳ್ಳಿ ಸಮೀಪದ ಗೌರವ್ನಗರದಲ್ಲಿ ರಸ್ತೆಬದಿ ಕಾರು ನಿಲುಗಡೆ ಮಾಡಿ ಎಂದಿನಂತೆ ವಾಕಿಂಗ್ಗೆ ಹೋಗಲು ರಸ್ತೆ ದಾಟುತ್ತಿದ್ದರು. ಆ ವೇಳೆ ವೇಗವಾಗಿ ಬಂದ ಪಲ್ಸರ್ ಬೈಕ್ ಕಾರನ್ನು ಹಿಂದಿಕ್ಕುವ ಭರದಲ್ಲಿ ಬಾಲರಾಜ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲರಾಜ್ ರಸ್ತೆಗೆ ಬಿದ್ದು ತಲೆ ಹಿಂಬದಿಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡಿಕ್ಕಿ ಹೊಡೆದ ಬೈಕ್ ಸವಾರ ಪರಾರಿಯಾಗಿದ್ದಾನೆ. ಕೃತ್ಯ ನಡೆದ ಆಸುಪಾಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿ ಆರೋಪಿ ಬೈಕ್ ಸವಾರನಿಗೆ ಪೊಲೀಸರು ಶೋಧ ನಡೆಸಿದ್ದಾರೆ.
ಹಲವು ಚಿತ್ರಗಳ ನಿರ್ಮಾಪಕ: ‘ಕರಿಯ’ ಚಿತ್ರದ ಮೂಲಕ ನಿರ್ಮಾಪಕರಾಗುವ ಜತೆಗೆ, ಪ್ರೇಮ್ರನ್ನು ನಿರ್ದೇಶಕರಾಗಿ ಪರಿಚಯಿಸಿದವರು ಬಾಲರಾಜ್. ‘ಕರಿಯ’ ನಂತರ ‘ಆಹಾ’, ‘ಜಾಕ್ಪಾಟ್’, ‘ಕೆಂಪ’, ‘ಜನ್ಮ’, ‘ಗಣಪ’, ‘ಕರಿಯ 2’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದರು. ‘ಕೆಂಪ’ ಚಿತ್ರದ ಮೂಲಕ ಮಗ ಸಂತೋಷ್ನನ್ನು ನಾಯಕ ನಟನನ್ನಾಗಿ ಪರಿಚಯಿಸಿದ್ದರು. ಸದ್ಯ, ಸಂತೋಷ್ ಅಭಿನಯದ ‘ಬರ್ಕ್ಲಿ’ ಎಂಬ ಚಿತ್ರವನ್ನು ನಿರ್ಮಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಕು. ಅಷ್ಟರಲ್ಲಿ ದುರಂತ ಸಂಭವಿಸಿ ಆನೇಕಲ್ ಬಾಲರಾಜ್ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ.
ಟೆಕ್ನಿಕಲ್ ಎವಿಡೆನ್ಸ್ ಸಿಗಲೇ ಇಲ್ಲ… ಕರಪತ್ರ ಹಂಚಿ ಆ್ಯಸಿಡ್ ನಾಗೇಶ್ನನ್ನು ಬಂಧಿಸಿದ್ದೇ ರೋಚಕ!
ಆ್ಯಸಿಡ್ ದಾಳಿಕೋರ ನಾಗೇಶ್ ಬಂಧನ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ