More

    ನಿನ್ನ ಅಪ್ಪ-ಅಮ್ಮ ಯಾರು? ಎನ್ನುತ್ತಾ ಸಿದ್ದರಾಮಯ್ಯರ ಮೂಲ ಕೆದಕಿದ ಈಶ್ವರಪ್ಪ

    ಬೆಂಗಳೂರು: ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿಯಲ್ಲಿ ಮಗ ಅಂತಾರೆ, ಬಾದಾಮಿ ಅಳಿಯ ಅಂತಾರೆ, ಚಾಮರಾಜಪೇಟೆ ಸೊಸೆ ಅಂತಾರೆ. ಹಾಗಾದೆ ನಿನ್ನ ಅಪ್ಪ ಯಾರು? ಕಾಂಗ್ರೆಸ್, ಜೆಡಿಎಸ್ ಇನ್ನೊಂದು ನಿಮ್ಮ ತಾಯಿ ಪಕ್ಷ ಯಾವುದು ಮೊದಲು ಹೇಳಿ?… ಹೀಗಂತ ಕೆ.ಎಸ್​.ಈಶ್ವರಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯರ ಮೂಲವನ್ನ ಕೆದಕಿದ್ದಾರೆ.

    ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಕೊಟ್ಟ ಕೊಡುಗೆ ದೇಶದಲ್ಲಿ ಎಲ್ಲಿಯೂ ಮಾಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ 45 ಜನ ಹಿಂದುಳಿದ ವರ್ಗದವರು ಇದ್ದಾರೆ. ಇದನ್ನು ಸಿದ್ದರಾಮಯ್ಯ ಸ್ಚಾಗತ ಮಾಡಿಲ್ಲ. ಮೆಡಿಕಲ್ ಸೀಟಿಗೆ ಶೇ.25 ಮೀಸಲಾತಿ ಕೊಟ್ಟಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ವಿಲವಿಲ ಒದ್ದಾಡ್ತಾ ಉತ್ತರ ಕೊಟ್ಡಿದ್ದಾರೆ. ಹಿಂದುಳಿದ ವರ್ಗ ತನ್ನ ಸ್ವತ್ತು ಅಂದುಕೊಂಡಿದ್ದಾರೆ ಸಿದ್ದರಾಮಯ್ಯ ಎಂದು ಈಶ್ವರಪ್ಪ ಕಿಡಿಕಾರಿದರು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದದ್ದಕ್ಕೆ ಲಿಂಗಾಯತರು ಬೇಜಾರ್ ಆಗಿದ್ದಾರೆ ಅಂತೀರಾ.. ಹಾಗಿದ್ರೆ ಬೊಮ್ಮಾಯಿ ಯಾರು? ಎಂದು ಪ್ರಶ್ನಿಸಿದರು.

    ಇಡೀ ರಾಜ್ಯದಿಂದ ನನಗೆ ಪ್ರೀತಿ ವಿಶ್ವಾಸದಿಂದ ಕರೆ ಮಾಡಿ ನೀವು ಡಿಸಿಎಂ ಆಗಬೇಕು ಎನ್ನುತ್ತಿದ್ದಾರೆ. ಸಿಎಂ ಆಗಬೇಕಿತ್ತು, ಡಿಸಿಎಂ ಆದರೂ ಆಗಿ ಎನ್ನುತ್ತಿದ್ದಾರೆ. ಬಿಜೆಪಿಯಲ್ಲಿ ಹಿರಿಯರು ಇದ್ದಾರೆ. ಅವರು ಏನ್ ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ಧನಾಗಿರಬೇಕು. ಇನ್ನು ಎರಡು ವರ್ಷಕ್ಕೆ ಚುನಾವಣೆ ಬರ್ತಿದೆ, ಸಂಘಟನೆ ಮೇಲೆಯೇ ಗೆಲ್ಲಬೇಕು ನಾವು ಎಂದು ಈಶ್ವರಪ್ಪ ಹೇಳಿದರು.

    ಜೀಸಸ್.. ಹೆಲ್ಪ್ ಮಿ… ಎಂದು ಕಣ್ಣೀರಿಟ್ಟ ಶಾಸಕ ಮಹೇಶ್! ಹಳೇ ವಿಡಿಯೋ ಹರಿಬಿಟ್ಟು ಕಾಲೆಳೆದ ನೆಟ್ಟಿಗರು

    ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

    ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

    ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

    ಜೀಸಸ್.. ಹೆಲ್ಪ್ ಮಿ… ಎಂದು ಕಣ್ಣೀರಿಟ್ಟ ಶಾಸಕ ಮಹೇಶ್! ಹಳೇ ವಿಡಿಯೋ ಹರಿಬಿಟ್ಟು ಕಾಲೆಳೆದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts