More

    ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ… ರೇಣುಕಾಚಾರ್ಯರನ್ನು ಮಾತಲ್ಲೇ ಚಿವುಟಿದ ಬಿಎಸ್​ವೈ

    ಬೆಂಗಳೂರು: ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಆಪ್ತ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಕಿಚಾಯಿಸಿದ ಸಂಗತಿ ವಿಧಾನಸಭೆ ಮೊಗಸಾಲೆಯಲ್ಲಿ ನಡೆಯಿತು.

    ಬುಧವಾರ ಕಲಾಪದ ನಡುವೆ ಯಡಿಯೂರಪ್ಪ ಮೊಗಸಾಲೆಯಲ್ಲಿ ಕುಳಿತಿದ್ದರು. ಹಲವು ಶಾಸಕರು ಅಲ್ಲಿಗೆ ಆಗಮಿಸಿ ನಮಸ್ಕರಿಸಿ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ರೇಣುಕಾಚಾರ್ಯ ಕೂಡ ಅಲ್ಲಿಗೆ ಬಂದು ನಮಸ್ಕರಿಸಿದರು.

    ರೇಣುಕಾಚಾರ್ಯರನ್ನು ಕಂಡೊಡನೆ, ಸಲುಗೆಯಿಂದ ಏನೋ ನೀನು ದಿನಾ ಒಳ್ಳೆ ಜಮೀರ್​ ಆಡಿದಂಗೆ ಆಡ್ತೀಯಲ್ಲೋ ಎಂದು ಮಾತಲ್ಲೇ ತಿವಿದರು. ರೇಣುಕಾಚಾರ್ಯ ಮಾತ್ರ ದೊಡ್ಡದಾಗಿ ನಗುತ್ತಾ ಪಕ್ಕಕ್ಕೆ ಬಂದು ನಿಂತರು. ಇತ್ತೀಚೆಗೆ ರೇಣುಕಾಚಾರ್ಯರ ಹೇಳಿಕೆ ಮತ್ತು ನಡವಳಿಕೆಯನ್ನು ಜಮೀರ್​ ಅಹ್ಮದ್​ಗೆ ಹೋಲಿಸಿ ಬಿಎಸ್​ವೈ ಚಿವುಟಿದರು.

    ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

    ಸೂರಿಲ್ಲದೆ ಅಂಬೇಡ್ಕರ್​ ಭವನದಲ್ಲಿ ತಂಗಿದ್ದೇ ತಪ್ಪಾ? ಬಡ ವೃದ್ಧೆಯ ಪ್ರಾಣ ತೆಗೆದ ಗ್ರಾಪಂ ಸದಸ್ಯನ ಮಗ! ಮೈಸೂರಲ್ಲಿ ಅಮಾನವೀಯ ಘಟನೆ

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts