ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆ ಅವರ ಸರಳತೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅದು ಆಗಾಗ ಹಲವರಿಗೆ ಹಲವು ರೀತಿಯಲ್ಲಿ ಅನುಭವಕ್ಕೆ ಬರುವ ಜತೆಗೆ ಉಳಿದವರ ಅರಿವಿಗೂ ಬರುತ್ತಿರುತ್ತದೆ. ಅಂಥದ್ದೇ ಒಂದು ಅನುಭವಕ್ಕೆ ಬೈಕರ್ ಒಬ್ಬರು ಪಾತ್ರರಾಗಿದ್ದು, ಆ ಖುಷಿಯನ್ನು ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ.
ಖಾಸಗಿ ಸಂಸ್ಥೆಯ ಉದ್ಯೋಗಿ, ಬೈಕ್ ಬಗ್ಗೆ ಪ್ಯಾಷನ್ ಇರುವ ಕಾರ್ತಿಕ್ ಗಣಪತಿ ಎಂಬವರು ತಮ್ಮ ಅತ್ಯಾಧುನಿಕ ಬೆನೆಲ್ಲಿ ಟಿಆರ್ಕೆ ಬೈಕ್ನಲ್ಲಿ ಸಾಗುತ್ತಿದ್ದಾಗ ಮಾರ್ಗಮಧ್ಯೆ ಕಾರು ನಿಲ್ಲಿಸಿಕೊಂಡಿದ್ದ ಶ್ರೀವೀರೇಂದ್ರ ಹೆಗ್ಗಡೆ ಅವರು ಕಾಣಿಸಿದ್ದಾರೆ. ಅವರನ್ನು ಕಂಡು ಖುಷಿಯಾಗಿ ತಕ್ಷಣ ಬೈಕ್ ನಿಲ್ಲಿಸಿ ಅವರನ್ನು ಮಾತನಾಡಿಸಿದ ಕಾರ್ತಿಕ್ ಗಣಪತಿ, ಹೆಗ್ಗಡೆಯವರೊಂದಿಗೆ ಕಳೆದ ಅತ್ಯಪರೂಪದ ಕ್ಷಣಗಳನ್ನು ಸೆಲ್ಫೀ ವಿಡಿಯೋ ಮಾಡಿಕೊಂಡಿದ್ದಾರೆ.
ಹೆಗ್ಗಡೆಯವರು ಸಿಕ್ಕಿದ ಖುಷಿಯನ್ನು ಹಂಚಿಕೊಂಡ ಕಾರ್ತಿಕ್, ಧರ್ಮಾಧಿಕಾರಿಯವರ ಸರಳತೆಯನ್ನು ಕೊಂಡಾಡಿದ್ದಾರೆ. ಬೈಕ್-ಕಾರುಗಳ ಕುರಿತು ಹೆಗ್ಗಡೆಯವರಿಗೆ ಇರುವ ಆಸಕ್ತಿ-ತಿಳುವಳಿಕೆಯನ್ನೂ ಹೇಳಿಕೊಂಡು ಖುಷಿಪಟ್ಟಿದ್ದಾರೆ. ಕಾರ್ತಿಕ್ ಅವರಿಗೆ ಹೆಗ್ಗಡೆ ಅವರು ತಮ್ಮ ಬಳಿ ಇದ್ದ ತಿನಿಸನ್ನೂ ನೀಡಿದ್ದಲ್ಲದೆ, ಅವರ ಹೊಚ್ಚ ಹೊಸ ಬೈಕ್ನ ಆ್ಯಕ್ಸಿಲರೇಟರ್ ತಿರುವಿ ಅದರ ಬಗ್ಗೆಯೂ ಕುತೂಹಲ ವ್ಯಕ್ತಪಡಿಸಿದ್ದಾರೆ. ವೀರೇಂದ್ರ ಹೆಗ್ಗಡೆಯವರು ವಿಜಯವಾಣಿಯ ಅಂಕಣಕಾರರೂ ಹೌದು. ವಿಜಯವಾಣಿಯಲ್ಲಿ ಧರ್ಮದರ್ಶನ ಎಂಬ ಅಂಕಣದ ಮೂಲಕ ಅವರು ನಿಯಮಿತವಾಗಿ ನಾನಾ ವಿಷಯಗಳ ಬಗ್ಗೆ ತಮ್ಮ ಅನುಭವ-ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣ: ಭಗವದ್ ಸಾಮೀಪ್ಯವೇ ಶ್ರೇಷ್ಠ
ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ