More

    ಬ್ಯಾರಲ್ ಜಗಳ ಕೊಲೆಯಲ್ಲಿ ಅಂತ್ಯ

    ಸವಣೂರ: ಕ್ಷುಲಕ ಕಾರಣಕ್ಕೆ ಆರಂಭವಾದ ಸಹೋದರರ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಯಲವಿಗಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

    ನಾಗಪ್ಪ ಬೆನಕನಹಳ್ಳಿ (56) ಕೊಲೆಯಾದವ. ಸಹೋದರ ಯಲ್ಲಪ್ಪ ಬೆನಕನಹಳ್ಳಿ ಕೊಲೆ ಆರೋಪಿ.

    ಘಟನೆ ಹಿನ್ನೆಲೆ: ನಾಗಪ್ಪ ಹಾಗೂ ಆತನ ಪತ್ನಿ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದರು. ಈ ವೇಳೆ ಜಮೀನಿನಲ್ಲಿದ್ದ ನೀರಿನ ಬ್ಯಾರಲ್ ಅನ್ನು ತೆಗೆದುಕೊಂಡು ಹೋಗಿದ್ದನ್ನು ನಾಗಪ್ಪ ಪ್ರಶ್ನಿಸಿದ ಕಾರಣಕ್ಕೆ ಸಹೋದರರ ಮಧ್ಯೆ ನಡೆದ ಮಾತಿನ ಚಕಮಕಿ ತಾರಕಕ್ಕೇರಿ ಜಗಳಕ್ಕೆ ತಿರುಗಿದೆ. ಆರೋಪಿ ಯಲ್ಲಪ್ಪ ಸಹೋದರನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಬಿಡಿಸಲು ಹೋದ ನಾಗಪ್ಪನ ಮೇಲೆ ಯಲ್ಲಪ್ಪ ಹಲ್ಲೆ ಮಾಡಿ, ನೆಲಕ್ಕೆ ಕೆಡವಿದ್ದಾನೆ. ಅಲ್ಲದೆ, ಕಟ್ಟಿಗೆಯ ಬ್ಯಾಕೋಲಿನಿಂದ ಎದೆಗೆ ಹೊಡೆದಿದ್ದರಿಂದ ನಾಗಪ್ಪ ಸಾವನ್ನಪ್ಪಿದ್ದಾನೆ. ಈ ಕುರಿತು ಮೃತನ ಪತ್ನಿ ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಯಲ್ಲಪ್ಪ ಬೆನಕನಹಳ್ಳಿಯನ್ನು ಪೋಲಿಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts