ಶ್ರೀಕಾಕುಲಂ: ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಕರೊನಾ ವೈರಸ್ ಗುಣಲಕ್ಷಣ ಹೊಂದಿದ 70 ವರ್ಷದ ವ್ಯಕ್ತಿ ಮೃತಪಟ್ಟಾಗ ಆತನ ಮೃತದೇಹ ಸಾಗಿಸಲು ಅರ್ಥ್ ಮೂವರ್ ಒಂದನ್ನು ಬಳಸಲಾಗಿತ್ತು. ಈ ದೃಶ್ಯವಿರುವ ವಿಡಿಯೋ ವೈರಲ್ ಆಗಿದೆ.
ಸೋಂಕಿತ ವ್ಯಕ್ತಿ ಗುರುವಾರ ರಾತ್ರಿ ನಿಧನರಾಗಿದ್ದು, ವಿಷಯ ತಿಳಿದ ಕೂಡಲೆ ಸ್ಥಳೀಯಾಡಳಿತದ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ್ದರು. ಮೃತದೇಹವನ್ನು ಕೂಡಲೆ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಕೊಂಡೊಯ್ಯಲು ಅರ್ಥ್ ಮೂವರ್ ಅನ್ನು ಬಳಸಿದ್ದರು. ಅಲ್ಲದೆ, ಸ್ಥಳವನ್ನು ಸ್ಯಾನಿಟೈಸ್ ಕೂಡ ಮಾಡಿದ್ದರು. ಈ ಸಂದರ್ಭದಲ್ಲಿ ಕೆಲವರು ಸ್ಥಳೀಯಾಡಳಿತ ಸಿಬ್ಬಂದಿಯ ಕೆಲಸವನ್ನು ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಅರ್ಥ್ ಮೂವರ್ನ ಚಾಲಕ ಪಿಪಿಇ ಕಿಟ್ ಧರಿಸಿರಲಿಲ್ಲ. ಆದರೆ, ಜತೆಗಿದ್ದ ನಾಲ್ವರು ಪಿಪಿಇ ಕಿಟ್ ಧರಿಸಿದ್ದರು. ಅರ್ಥ್ ಮೂವರ್ನ ಮುಂಭಾಗದ ಕೈಯಲ್ಲಿ ಡೆಡ್ ಬಾಡಿಯನ್ನು ಹೊತ್ತೊಯ್ಯಲಾಗಿತ್ತು.
ಇದನ್ನೂ ಓದಿ: ಲಡಾಖ್ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ
ಅಮಾನವೀಯ ಕೃತ್ಯ ಎಂದು ಆಂಧ್ರಪ್ರದೇಶ ಸಿಎಂ ಕಚೇರಿ ಟೀಕಿಸಿದೆ. ಅಲ್ಲದೆ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದು, ಕೃತ್ಯವನ್ನು ಕಳವಳಕಾರಿ, ದಿಗ್ಭ್ರಾಂತಿ ತರಿಸಿದೆ. ಮಾನವೀಯತೆ ಮರೆತು ಈ ರೀತಿ ವರ್ತಿಸಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಸಿಎಂಒ ನಿರ್ದೇಶನಾನುಸಾರ ಶ್ರೀಕಾಕುಳಂ ಜಿಲ್ಲಾಧಿಕಾರಿ ಜೆ.ನಿವಾಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಪಾಲಾಸಾ ಮುನ್ಸಿಪಲ್ ಕಮಿಷನರ್ ಪಿ.ನಾಗೇಂದ್ರ ಕುಮಾರ್ ಮತ್ತು ಸ್ಯಾನಿಟರಿ ಇನ್ಸ್ಪೆಕ್ಟರ್ ಎನ್.ರಾಜೀವ್ ಅವರನ್ನು ಅಮಾನತುಗೊಳಿಸಿದ್ದಾರೆ. ಸ್ಥಳೀಯರ ಒತ್ತಡಕ್ಕೆ ಮಣಿದು ಕಮಿಷನರ್ ಕುಮಾರ್ ಆ ರೀತಿ ಕ್ರಮತೆಗೆದುಕೊಂಡಿದ್ದಾರೆ. ಮೃತರ ಕುಟುಂಬದ ಸದಸ್ಯರೂ ಈ ರೀತಿ ಅರ್ಥ್ ಮೂವರ್ ಮೂಲಕ ಶವ ಸಾಗಿಸುವುದಕ್ಕೆ ಅನುಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಬೇಕಾದ್ದು ಆಯಾ ಸ್ಥಳೀಯಾಡಳಿತದ ಕರ್ತವ್ಯ. ಕೋವಿಡ್ ಸೋಂಕಿತ ಮೃತರಾದ ಮೊದಲ ಪ್ರಕರಣವೇನಲ್ಲ ಇದು. ಸರಿಯಾದ ವಾಹನವನ್ನೇ ಬಳಸಬಹುದಿತ್ತು. ಇದುವರೆಗೆ ಜಿಲ್ಲೆಯಲ್ಲಿ ಇಂಥ ಆರು ಮರಣಗಳಾಗಿವೆ. ಕೆಲವು ಕೇಸ್ಗಳಲ್ಲಿ ಕುಟುಂಬ ವರ್ಗವೇ ಜತೆಗೆ ಇರಲಿಲ್ಲ. ಕೆಲವು ಕೇಸ್ಗಳಲ್ಲಿ ಕುಟುಂಬ ವರ್ಗಕ್ಕೆ ಸ್ಥಳೀಯಾಡಳಿತ ನೆರವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕಾರಿನಲ್ಲಿ ಜೋಡಿಯ ಸೆಕ್ಸ್; ವಿಡಿಯೋ ನೋಡಿದ ವಿಶ್ವಸಂಸ್ಥೆ ಶಾಕ್…ದೃಶ್ಯದಿಂದ ಡಿಸ್ಟರ್ಬ್ ಆದ ಯುನ್ ವಕ್ತಾರ !