More

    ಅನುಮಾನವೇ ಬೇಡ ಬಹುಮಾನ ಪಕ್ಕಾ…

    ಬೆಂಗಳೂರು: ‘ಶ್ರೀಭರತ ಬಾಹುಬಲಿ’ ಸಿನಿಮಾ ನೋಡುವ ಪ್ರೇಕ್ಷಕರಿಗೆ 1 ಕೋಟಿ ರೂ. ಮೊತ್ತದ ಬಹುಮಾನ ಕೊಡುವುದಾಗಿ ಹೇಳಿದ್ದ ಚಿತ್ರತಂಡ, ಇದೀಗ ಆ ಮಾತನ್ನು ಪುನರುಚ್ಚರಿಸಿದೆ. ‘ನಮ್ಮ ಚಿತ್ರವನ್ನು ನೋಡುವ ಪ್ರೇಕ್ಷಕರ ಪೈಕಿ ಅದೃಷ್ಟಶಾಲಿ 20 ಮಂದಿಗೆ ಒಟ್ಟು 1 ಕೋಟಿ ರೂ. ಮೊತ್ತದ ಬಹುಮಾನ ನೀಡುತ್ತೇವೆ’ ಎಂಬುದಾಗಿ ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಆ ಬಳಿಕ ಮತ್ತೊಮ್ಮೆ ಸುದ್ದಿಗೋಷ್ಠಿ ಕರೆದಿರುವ ಚಿತ್ರತಂಡ, ಬಹುಮಾನದ ವಿಷಯದ ಬಗ್ಗೆ ಇದ್ದ ಗೊಂದಲ ಬಗೆಹರಿಸಿದೆ. ‘ಕೆಲವರು ಇಷ್ಟೊಂದು ಬಹುಮಾನ ಕೊಡುವುದು ನಿಜವಾ?’ ಎಂದು ಅನುಮಾನ ವ್ಯಕ್ತಪಡಿಸಿದ್ದನ್ನು ಕೇಳಿದ್ದೇವೆ. ಆ ಬಗ್ಗೆ ಅನುಮಾನವೇ ಬೇಡ, ಬಹುಮಾನ ಪಕ್ಕಾ..’ ಎಂಬುದಾಗಿ ನಿರ್ವಪಕ ಶಿವಪ್ರಕಾಶ್ ಹಾಗೂ ನಿರ್ದೇಶಕ ಮಂಜು ಮಾಂಡವ್ಯ ಭರವಸೆ ನೀಡಿದ್ದಾರೆ.

    ಸಿನಿಮಾ ಬಿಡುಗಡೆ ಆದಾಗಿನಿಂದ 14 ದಿನಗಳವರೆಗೆ ಚಿತ್ರ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಪ್ರತಿ ಟಾಕೀಸ್​ನಲ್ಲಿ ಟಿಕೆಟ್ ಜತೆಗೆ ಒಂದು ಕೂಪನ್ ನೀಡಲಾಗುವುದು. ಅದಕ್ಕಾಗಿ 80 ಲಕ್ಷ ಕೂಪನ್​ಗಳನ್ನು ಈಗಾಗಲೇ ಪ್ರಿಂಟ್ ಮಾಡಿಸಲಾಗಿದೆ. 14ನೇ ದಿನದ ನಂತರ ಆ ಕೂಪನ್​ಗಳನ್ನು ಸಂಗ್ರಹಿಸಿ ಲಕ್ಕಿಡಿಪ್ ಮೂಲಕ ಸಾರ್ವಜನಿಕವಾಗಿ 20 ಮಂದಿಯನ್ನು ಆರಿಸಲಾಗುವುದು’ ಎಂದು ಮಂಜು ಮಾಂಡವ್ಯ ತಿಳಿಸಿದರು.

    ‘ವಿಜೇತ ಹತ್ತು ಮಂದಿಗೆ ತಲಾ 5 ಲಕ್ಷ ರೂ. ಮೌಲ್ಯದ ಕಾರು, ಇನ್ನು ಹತ್ತು ಮಂದಿಗೆ ತಲಾ 5 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ನೀಡಲಾಗುವುದು ಎಂದು ನಿರ್ವಪಕ ಶಿವಪ್ರಕಾಶ್ ಹೇಳಿದರು. ಸಿನಿಮಾ ಬಿಡುಗಡೆ ಆಗಿ 14 ದಿನಗಳ ಒಳಗೆ ಚಿತ್ರ ವೀಕ್ಷಿಸುವ ಕರ್ನಾಟಕದಲ್ಲಿನ ಪ್ರೇಕ್ಷಕರಿಗಷ್ಟೇ ಈ ಬಹುಮಾನ ಅನ್ವಯಿಸುತ್ತದೆ ಎಂದು ಚಿತ್ರತಂಡ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts