ರಾಣೆಬೆನ್ನೂರ: ಯಾವುದೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಗುಡಗೂರ ಕ್ರಾಸ್ ಬಳಿ ಸೋಮವಾರ ಸಂಭವಿಸಿದೆ.
ಎಂ.ಜಿ. ತಿಮ್ಮಾಪುರ ಗ್ರಾಮದ ಗುಡ್ಡಪ್ಪ ಕರಿಯಪ್ಪ ಡೊಣ್ಣಿ ಮೃತ ಬೈಕ್ ಸವಾರ.
ಈತ ರಾಣೆಬೆನ್ನೂರ ಕಡೆಯಿಂದ ಎಂ.ಜಿ. ತಿಮ್ಮಾಪುರ ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಯಾವುದೋ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.