ಕೊಪ್ಪಳ: ಬಂಗಾಳ ಮೂಲದ ಅಂಧ ಯುವತಿ ಪೂಜಾ ಘೋಷ್ ಎಂಬಾಕೆಯನ್ನು ಕೊಪ್ಪಳದ ಎಚ್.ಮಂಜುನಾಥ್ ಶೆಟ್ಟಿ ಎಂಬುವರು ಮದುವೆಯಾಗಿದ್ದಾರೆ. ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆನಾರೋಗ್ಯ ಸಮಸ್ಯೆಯಿಂದಾಗಿ ಯುವತಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು.
ಯುವತಿಗೆ ಕಣ್ಣು ಕಾಣದಂತಾದ ಬಳಿಕ ಯಾರೂ ಮದುಯಾಗಲು ಮುಂದೆ ಬರುತ್ತಿರಲಿಲ್ಲ. ಇದೀಗ ಕೊಪ್ಪಳದ ಯುವಕ ಅಂಧೆಯ ಬಾಳಿಕೆ ಬೆಳಕಾಗಿದ್ದಾನೆ.
ಇದನ್ನೂ ಓದಿ: ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನದ ಕತ್ತು ಸೀಳಿ ಹತ್ಯೆ!
ಅಂಗವಿಕಲೆ ಜತೆಗೆ ಬದುಕು ಹಂಚಿಕೊಳ್ಳಬೇಕು ಎಂಬ ಆಸೆಯೊಂದಿಗೆ ಮಂಜುನಾಥ್ ಸಂಗಾತಿಯ ಹುಡುಕಾಟದಲ್ಲಿದ್ದರು. ಆನ್ಲೈನ್ ಮೂಲಕ ಆದ ಪರಿಚಯದಿಂದಾಗಿ ಇದೀಗ ಈ ಭಾಂಧವ್ಯ ಏರ್ಪಟ್ಟಿದೆ.
ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ ಮಂಜುನಾಥ್ಗೆ ಆಕೆಯ ಕುಟುಂಬಸ್ಥರು ಯುವಕನ ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಪರಿಶೀಲಿಸಿ ಮದುವೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಈ ಜೀಡಿ ಗುರುವಾರ ದಾಂಪತ್ಯ ಜೀವನಕ್ಕೆ ನೂರಾರು ಜನರ ಸಮ್ಮುಖದಲ್ಲಿ ನಾಂದಿ ಹಾಡಿದ್ದಾರೆ.