ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬದಂತೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ 2023ರ ಅಂಗವಾಗಿ ಮಾಧ್ಯಮಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರಿಗಾಗಿ ಮತದಾನದ ವಿಷಯದ ಬಗ್ಗೆ, ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಮೇ 10 ರಂದು ನಡೆದ ಮತದಾನದಲ್ಲಿ, ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಕೇಂದ್ರ ಚುನಾವಣಾ ಆಯೋಗ ಪ್ರಶಂಸಿವುದರ ಜತೆಗೆ ತನ್ನ ವರದಿ ಹಾಗೂ ಪುಸ್ತಕಗಳ ಮುಖವುಟಗಳಲ್ಲಿ ಬಳಸಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023 ನಿಮಿತ್ತ ನಡೆದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರನ್ನು ಚುನಾವಣಾ ಆಯೋಗ ಗುರುವಾರ ಘೋಷಿಸಿದೆ. ಮೇ 10ರಂದು ನಡೆದ ಮತದಾನದ ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಸ್ಪರ್ಧೆಗೆ ಛಾಯಾಚಿತ್ರಗಳನ್ನು ಕಳುಹಿಸಲು ಕಳುಹಿಸಲು ಮೇ 20 ಕೊನೆಯ ದಿನವಾಗಿತ್ತು.
ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 63 ಛಾಯಾಗ್ರಾಹಕರು/ಹವ್ಯಾಸಿ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸೂಕ್ತ ಶೀರ್ಷಿಕೆಯೊಂದಿಗೆ 5 ಚಿತ್ರಗಳನ್ನು ಕಳುಹಿಸುವಂತೆ ತಿಳಿಸಲಾಗಿತ್ತು. ಸ್ಪರ್ಧೆಯಲ್ಲಿ ಸಲ್ಲಿಕೆಯಾಗಿದ್ದ ಫೋಟೋಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸಮಿತಿಯನ್ನು ಸಹ ಆಯೋಗದ ವತಿಯಿಂದ ರಚಿಸಲಾಗಿತ್ತು.
ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಉತ್ತಮ ಛಾಯಾಚಿತ್ರಗಳನ್ನು ತೆಗೆದ ವಿಜೇತರನ್ನು ಘೋಷಿಸಲಾಗಿದ್ದು ಒಟ್ಟು 6 ಮಂದಿಗೆ ಬಹುಮಾನ ಲಭಿಸಿದೆ.
ವಿಜೇತರ ಪಟ್ಟಿ
- ತಾಜುದ್ದೀನ್ ಅಜಾದ್, ಹಿರಿಯ ಛಾಯಾಗ್ರಾಹಕರು, ಪ್ರಜಾವಾಣಿ, ಕಲಬುರಗಿ(ಪ್ರಥಮ ಬಹುಮಾನ 25,000 ಸಾವಿರ ರೂ)
- ಇಂದ್ರಕುಮಾರ್ ದಸ್ತೇನವರ್, ಛಾಯಾಗ್ರಾಹಕರು, ಹಳ್ಳಿ ಸಂದೇಶ ಸುದ್ದಿ ಪತ್ರಿಕೆ, ಬಾಗಲಕೋಟೆ(ದ್ವಿತೀಯ ಬಹುಮಾನ 15,000 ಸಾವಿರ ರೂ.)
- ಫಕ್ರುದ್ದೀನ್.ಹೆಚ್, ಛಾಯಾಗ್ರಾಹಕರು, ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್, ಮಂಗಳೂರು(ತೃತೀಯ ಬಹುಮಾನ 10,000 ಸಾವಿರ ರೂ.)
- ಸುರೇಶ್.ಪಿ, ಹಿರಿಯ ಛಾಯಾಗ್ರಾಹಕರು, ಕನ್ನಡ ಪ್ರಭ, ಬೆಂಗಳೂರು(ಸಮಾಧಾನಕರ ಬಹುಮಾನ 3,000 ಸಾವಿರ ರೂ.)
- ಎನ್. ನರಸಿಂಹಮೂರ್ತಿ, ಛಾಯಾಗ್ರಾಹಕರು, ದಿ ಎಕನಾಮಿಕ್ ಟೈಮ್ಸ್, ಬೆಂಗಳೂರು(ಸಮಾಧಾನಕರ ಬಹುಮಾನ 3,000 ಸಾವಿರ ರೂ.)
- ಕೆ. ವೆಂಕಟೇಶ್ ಹವ್ಯಾಸಿ ಛಾಯಾಗ್ರಾಹಕರು, ಮಲ್ಲೇಶ್ವರಂ(ವಿಶೇಷ ಬಹುಮಾನ 5,000 ಸಾವಿರ ರೂ.)