More

    ಮತ ಹಾಕಿಲ್ಲವೆಂದು ಸಹೋದರರ ನಡುವೆ ಜಗಳ; ಸಿಟ್ಟಿನಲ್ಲಿ ದೊಡ್ಡಪ್ಪನ ಜೀವವನ್ನೇ ತೆಗೆದ ಮಗ!

    ದೇವನಹಳ್ಳಿ: ಕ್ಷಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡಪ್ಪನನ್ನೇ ಮಗ ಹತ್ಯೆಗೈದಿದ್ದಾನೆ. ಈ ಘಟನೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (56) ಮೃತ ರ್ದುದೈವಿ. ಆದಿತ್ಯ ಕೊಲೆ ಆರೋಪಿಯಾಗಿದ್ದು, ಚಾಕುವಿನಿಂದ ಇರಿದು ದೊಡ್ಡಪ್ಪನ ಜೀವ ತೆಗೆದಿದ್ದಾನೆ.

    ಇದನ್ನೂ ಓದಿ: ಸಿ.ಟಿ.ರವಿ ಸೋಲಿಗೆ ಅವರ ನಾಲಗೆಯೇ ಕಾರಣ: ಎಸ್.ಎಲ್.ಭೋಜೇಗೌಡ

    ಮೇ.13ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ರಾತ್ರಿ ಚುನಾವಣೆಯ ವಿಚಾರಕ್ಕೆ ಗ್ರಾಮದ ಕೃಷ್ಣಪ್ಪ ಹಾಗೂ ಗಣೇಶಪ್ಪ ಎಂಬ ಸಹೋದರರ ನಡುವೆ ವಾಗ್ವಾದ ಆರಂಭವಾಗಿದೆ. ಮತ ಹಾಕಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಸಹೋದರರು ಜಗಳ ಮಾಡಿದ್ದಾರೆ. ಈ ವೇಳೆ ಈ ವೇಳೆ ಗಣೇಶಪ್ಪನ ಮಗ ಕೃಷ್ಣಪ್ಪನನ್ನು ಕೊಲೆ ಮಾಡಿದ್ದಾನೆ.

    ಇದನ್ನೂ ಓದಿ: ಮೈಸೂರಿನಲ್ಲಿ ಮೋದಿ ರೋಡ್ ಶೋ ಮಾಡಿದ್ದ ರಸ್ತೆ ಸಗಣಿ ನೀರಿನಿಂದ ಸ್ವಚ್ಚ‌! ಈ ದಾರಿಯ ಕರ್ಮ ತೊಳೆದಿದ್ದೇವೆ ಎಂದ ಕಾಂಗ್ರೆಸ್ ಮುಖಂಡ

    ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts