ಹೈದರಾಬಾದ್: ನಟಿ ಸಮಂತಾ ಅವರ ಸಿನಿಮಾ ವೃತ್ತಿ ಜೀವನ ಅಂತಿಮ ಹಂತಕ್ಕೆ ಬಂದಿದೆ ಎಂದು ತೆಲುಗಿನ ಖ್ಯಾತ ನಿರ್ಮಾಪಕ ಚಿಟ್ಟಿಬಾಬು ಹೇಳಿದ್ದಾರೆ.
ಇತ್ತೀಚೆಗೆ ತೆರೆಕಂಡ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನ ತೋರಿದನ್ನು ಉಲ್ಲೇಖಿಸಿ ಚಿಟ್ಟಿಬಾಬು ಅವರು ಈ ಮಾತುಗಳನ್ನು ಆಡಿದ್ದಾರೆ. ಕೇವಲ ಹಣದ ಲಾಭಕ್ಕಾಗಿಯೇ ಪುಷ್ಪಾ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದಾರೆ ಎಂದು ಆರೋಪಿಸಿ, ಸಿನಿಮಾ ಪ್ರಚಾರಕ್ಕೆ ಅಗ್ಗದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಸಮಂತಾ ವಿರುದ್ಧ ಚಿಟ್ಟಿಬಾಬು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮಗಳು ಹಬ್ಬಕ್ಕೆ ಬರ್ತಾಳೆ ಅಂತ ಖುಷಿಯಲ್ಲಿದ್ದ ಹೆತ್ತವರಿಗೆ ಬಂದೆರಗಿತು ಬರಸಿಡಿಲಿನಂತಹ ಸುದ್ದಿ
ಸ್ಟಾರ್ ನಟಿ ಎಂಬ ಪಟ್ಟವನ್ನು ಕಳೆದುಕೊಂಡ ಕ್ಷಣದಿಂದ ಸಮಂತಾ ಅವರ ತಮ್ಮ ಹಾದಿಯಲ್ಲಿ ಬರುವ ಎಲ್ಲ ಆಫರ್ಗಳನ್ನು ಸ್ವಲ್ಪವೂ ಯೋಚಿಸದೇ ಸ್ವೀಕರಿಸುತ್ತಿದ್ದಾರೆ. ಅಲ್ಲದೆ, ಶಾಕುಂತಲಂ ಸಿನಿಮಾದಲ್ಲಿ ಸಮಂತಾರನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಸಿನಿಮಾ ಪ್ರಚಾರದ ಸಮಯದಲ್ಲಿ ಹೇಳಿಕೊಳ್ಳುವ ಮೂಲಕ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪ್ರೇಕ್ಷಕರಿಗೆ ಬೇಕಾಗಿರುವುದು ಒಳ್ಳೆಯ ವಿಷಯಾಧಾರಿತ ಸಿನಿಮಾ ಹೊರತು ನಿಮ್ಮ ಕಣ್ಣೀರಲ್ಲ ಎನ್ನುವ ಮೂಲಕ ಸಮಂತಾ ವಿರುದ್ಧ ಚಿಟ್ಟಿಬಾಬು ಟೀಕಾಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್)
ಹೋಟೆಲ್ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್ ಹಿಂದಿರುವ ಕರಾಳತೆ ಬಯಲು
VIDEO| ವಿಮಾನದಲ್ಲಿ ಮಗುವಿನ ಅಳು ತಾಳಲಾರದೆ ಕೂಗಾಡಿದ ಪ್ರಯಾಣಿಕ; ಮುಂದೇನಾಯ್ತು?
ಮೊಬೈಲ್ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದ ಮಹಿಳೆ; ಮುಂದೆನಾಯ್ತು ನೋಡಿ…