ಬೆಂಗಳೂರು: ನಾವು 141 ಸ್ಥಾನಗಳು ಗೆಲ್ಲುವುದಿತ್ತು. ಜಗದೀಶ್ ಶೆಟ್ಟರ್, ಸವದಿ ಕಾಂಗ್ರೆಸ್ಗೆ ಬಂದ ಮೇಲೆ ನಾವು 150 ಸ್ಥಾನ ಗೆಲ್ಲುವುದು ಖಚಿತವಾಗಿದೆ. ಅವರಿಂದ ರಾಜ್ಯದಲ್ಲಿ ವೀರಶೈವರ ಮತಗಳು ಎರಡರಿಂದ ಮೂರರಷ್ಟು ಬರುತ್ತವೆ ಎಂದು ಹೇಳುವ ಮೂಲಕವಾಗಿ ಡಿ.ಕೆ.ಶಿವಕುಮಾರ್ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಿಂದ ಬೀದರ್ವರೆಗೂ ಅವರ ಅಭಿಮಾನಿಗಳು ಕಾಂಗ್ರೆಸ್ಗೆ ಶಿಫ್ಟ್ ಆಗುತ್ತಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಭ್ರಷ್ಟಾಚಾರವನ್ನು ಹೊಡೆದು ಓಡಿಸುವ ದಿನ ಬರುತ್ತಾ ಇದೆ ಎಂದಿದ್ದಾರೆ.
ಇದನ್ನೂ ಓದಿ: ನನಗೆ ವಿಧಾನಸಭೆ ಟಿಕೆಟ್ ತಪ್ಪಲು ಬಿ. ಎಲ್. ಸಂತೋಷ್ ಅವರೇ ಕಾರಣ; ಕಣ್ಣೀರು ಹಾಕಿದ ಜಗದೀಶ್ ಶೆಟ್ಟರ್
ಬಿಜೆಪಿ- ಜೆಡಿಎಸ್ನ ಕಾರ್ಯಕರ್ತರು ಕಾಂಗ್ರೆಸ್ ಬರಲಿ. ಸ್ಥಳೀಯವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿ. ಯಾರಾದರೂ ನಮ್ಮ ನಮ್ಮ ಸಿದ್ಧಾಂತ ಒಪ್ಪಿಕೊಂಡರೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನನಗೆ ವಿಧಾನಸಭೆ ಟಿಕೆಟ್ ತಪ್ಪಲು ಬಿ. ಎಲ್. ಸಂತೋಷ್ ಅವರೇ ಕಾರಣ; ಕಣ್ಣೀರು ಹಾಕಿದ ಜಗದೀಶ್ ಶೆಟ್ಟರ್