ನವದೆಹಲಿ: ಅಸೀಮ ಶೌರ್ಯ, ಸಾಹಸ ತೋರಿದ ಕೇಂದ್ರ ಮತ್ತು ರಾಜ್ಯದ ಪೊಲೀಸ್ ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶೌರ್ಯ, ವಿಶೇಷ ಸೇವೆ ಮತ್ತು ಶ್ರೇಷ್ಠ ಸೇವಾ ಪದಕಗಳನ್ನು ಒಳಗೊಂಡಂತೆ 926 ಪದಕಗಳನ್ನು ಘೋಷಿಸಲಾಗಿದೆ.
ಇದರಲ್ಲಿ 81 ಪದಕಗಳನ್ನು ಜಮ್ಮು -ಕಾಶ್ಮೀರ ಪೊಲೀಸರು ಪಡೆದಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ. 55 ಪದಕಗಳ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಎರಡನೇ ಸ್ಥಾನದಲ್ಲಿದೆ. 55 ಪದಕಗಳಲ್ಲಿ 41 ಪದಕಗಳನ್ನು ಕಾಶ್ಮೀರ ಕಣಿವೆಯಲ್ಲಿನ ಕಾರ್ಯಾಚರಣೆಗೆಳಿಗೆ ಸಂಬಂಧ ಪಟ್ಟಂತೆ ನೀಡಲಾಗಿದ್ದು, ಉಳಿದ 14 ಪದಕಗಳನ್ನು ಛತ್ತೀಸ್ಗಢದಲ್ಲಿನ ಮಾವೋವಾದಿಗಳ ವಿರುದ್ಧ ನಡೆಸಿದ ಕಾರ್ಯಾಚರಣೆಗಳಿಗಾಗಿ ಘೊಷಿಸಲಾಗಿದೆ.
ಇದನ್ನೂ ಓದಿ: ಕರೊನಾ ಮುಂಜಾಗ್ರತೆ ನಡುವೆ ಸ್ವಾತಂತ್ರ್ಯ ಸಂಭ್ರಮ: ಸೀಮಿತ ಸಂಖ್ಯೆಯ ಗಣ್ಯರಿಗೆ ಆಹ್ವಾನ
ಇಬ್ಬರಿಗೆ ಶೌರ್ಯ ಪದಕ: 2008ರಲ್ಲಿ ನಡೆದ ಬಟ್ಲಾ ಹೌಸ್ ಎನ್ಕೌಂಟರ್ನಲ್ಲಿ ಮೃತರಾದ ದೆಹಲಿ ಪೊಲೀಸ್ ಇನ್ಸ್ಪೆಕ್ಟರ್ ಮೋಹನಚಂದ್ ಶರ್ವಗೆ ಸತತ 7ನೇ ಬಾರಿ ಮರಣೋತ್ತರವಾಗಿ ಶೌರ್ಯ ಪದಕ ನೀಡಲಾಗುತ್ತಿದೆ.
ಸಿಆರ್ಪಿಎಫ್ನ ಸಹಾಯಕ ಕಮಾಂಡೆಂಟ್ ನರೇಶ್ ಕುಮಾರ್ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೋರಿದ ಸಾಹಸಕ್ಕಾಗಿ ಏಳನೇ ಬಾರಿ ಶೌರ್ಯ ಪದಕ ಘೋಷಣೆಯಾಗಿದೆ. ಉತ್ತರ ಪ್ರದೇಶ ಪೊಲೀಸರಿಗೆ 23 ಪದಕಗಳನ್ನು ನೀಡಲಾಗಿದ್ದು, ದೆಹಲಿ ಪೊಲೀಸರಿಗೆ 16, ಮಹಾರಾಷ್ಟ್ರಕ್ಕೆ 14 ಮತ್ತು ಜಾರ್ಖಂಡ್ಗೆ 12 ಪದಕಗಳು ಘೋಷಣೆಯಾಗಿದೆ. (ಏಜೆನ್ಸೀಸ್)