ಕಲಬುರಗಿ: ತೊಗರಿಯ ಕಣಜ ಕಲಬುರಗಿಯಲ್ಲಿ ಆರಂಭವಾಗಿರೋ 85ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿವಸದಲ್ಲಿ ಸಾಕಷ್ಟು ಸಾಹಿತ್ಯಾಸಕ್ತರು ಭಾಗವಹಿಸಿದರು. ಸಮ್ಮೇಳನಕ್ಕೆ ಬರುವವರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಉತ್ತರ ಮತ್ತು ದಕ್ಷಿಣ ಕರ್ನಾಟಕ ಶೈಲಿಯಲ್ಲಿ ಬಗೆ ಬಗೆಯ ಆಹಾರವನ್ನು ಸಾಹಿತ್ಯಾಸಕ್ತರಿಗೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿತ್ತು. ಭೋಜನ ತಯಾರಿ ಹಿಂದೆ ಶ್ರಮಿಸಿದ ಬಾಣಸಿಗರ ಒಂದಿಷ್ಟು ಫೋಟೋ ಝಲಕ್ ಅನ್ನು ವಿಜಯವಾಣಿ ಛಾಯಾಗ್ರಾಹ ಸುಧೀಂದ್ರ ಶ್ರೀರಂಗರಾಜು ಸೆರೆಹಿಡಿದಿದ್ದು, ಅವುಗಳನ್ನು ಈ ಕೆಳಗೆ ಕಾಣಬಹುದಾಗಿದೆ.