ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ 6 ತಿಂಗಳ ಮಗು ಹಾಗೂ 3 ವರ್ಷದ ಮಗುವಿನ ವಿರುದ್ಧ ಪ್ರಕರಣ ದಾಖಲಾಗಿದೆ. ಕರೊನಾ ಸೋಂಕಿನಿಂದ ಬಳಲುತ್ತಿದ್ದು, ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ, ಅದನ್ನು ಉಲ್ಲಂಘಿಸಿ ಇತರರ ಜೀವಕ್ಕೆ ಅಪಾಯ ತಂದ ಆರೋಪವನ್ನು ಈ ಮಕ್ಕಳ ಮೇಲೆ ಹೊರಿಸಲಾಗಿದೆ.
ಈ ವಿಷಯ ತಿಳಿಯುತ್ತಲೇ ಮಕ್ಕಳ ಪಾಲಕರು ಭಾರಿ ಆಕ್ರೋಶ ಹಾಗೂ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಆಶಿಶ್ ಚೌಹಾಣ್, ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಲ್ಲದೆ, ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಕೃಷಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಗಿರೀಶ್ ಸಿಂಗ್ ರಾಣಾ ಅಮಾನತುಗೊಂಡ ಅಧಿಕಾರಿ. ಉತ್ತರಕಾಶಿ ಜಿಲ್ಲೆಯ ಚಿನ್ಯಾಲಿಸೂರ್ ಎಂಬಲ್ಲಿ ಗಿರೀಶ್ ಸಿಂಗ್ ರಾಣಾ ಕೋವಿಡ್ 19 ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದರು. ಹೋಂ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಿದ್ದರೂ ಜಿಲ್ಲೆಗೆ ಮರಳುವವರ ಮೇಲೆ ನಿಗಾವಹಿಸುವುದು ಇವರ ಕರ್ತವ್ಯವಾಗಿತ್ತು.
ಹರಿಯಾಣದಲ್ಲಿ ಕೆಲಸ ಹುಡುಕಿಕೊಂಡು ಹೋಗಿದ್ದ ಚಿನ್ಯಾಲಿಸೂರ್ನ ಕುಟುಂಬವೊಂದರ ಇಬ್ಬರು ಮಕ್ಕಳು ಮತ್ತಿತರರು ಸೇರಿ ಒಟ್ಟು 47 ಮಂದಿ ಜಿಲ್ಲೆಗೆ ಮರಳಿದ್ದರು. ಇದನ್ನು ಗಮನಿಸಿದ್ದ ಗಿರೀಶ್ ಸಿಂಗ್ ರಾಣಾ, ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್ನಲ್ಲಿರುವಂತೆ ಈ ಕುಟುಂಬ ಸೇರಿ ಎಲ್ಲರಿಗೂ ಸೂಚಿಸಿದ್ದರು. ಆದರೆ ಇವರು ಯಾರೂ ಹೋಂ ಕ್ವಾರಂಟೈನ್ ಸೂಚನೆಯನ್ನು ಪಾಲಿಸಿರಲಿಲ್ಲ. ಈ ವಿಷಯ ತಿಳಿದ ಅವರು, ತಪ್ಪಿತಸ್ಥರೆಲ್ಲರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದ್ದರು.
ಅದರಂತೆ ಗಿರೀಶ್ ಸಿಂಗ್ ರಾಣಾ ಅವರ ಜತೆಗಿದ್ದ ಅಧಿಕಾರಿಗಳು ಮಕ್ಕಳ ವಯಸ್ಸು ಕೇಳದೆ, ಆ ಮಕ್ಕಳನ್ನೂ ಸೇರಿಸಿಕೊಂಡು ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು.
ಭಾರತ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ತೊಡಗಿದ್ದ ಪಾಕ್ಗೆ ಬುದ್ಧಿ ಕಲಿಸಿದ ಟ್ವಿಟರ್