More

    50 ವರ್ಷಗಳ ನಂತರ ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ

    ಯಳಂದೂರು: ರಾಜ್ಯದಲ್ಲಿ ವಾಸ ಮಾಡುವ ಪೌರಕಾರ್ಮಿಕರಿಗೆ ಕಳೆದ 50 ವರ್ಷಗಳಿಂದಲೂ ಹಕ್ಕುಪತ್ರ ವಿತರಣೆ ಮಾಡಿರಲಿಲ್ಲ. ಈ ವಿಷಯ ರಾಜ್ಯ ಸರ್ಕಾರದ ಗಮನಕ್ಕೆ ಬಂದು ರಾಜ್ಯಾದ್ಯಂತ ಪೌರಕಾರ್ಮಿಕರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಎನ್. ಮಹೇಶ್ ಮಾಹಿತಿ ನೀಡಿದರು.

    ಪಟ್ಟಣದ ಸಿಡಿಎಸ್ ಸಮುದಾಯ ಭನವದಲ್ಲಿ ಗುರುವಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಪಟ್ಟಣದ ಪೌರಕಾರ್ಮಿಕರಿಗೆ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1018 ಪೌರಕಾರ್ಮಿಕ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಎಲ್ಲ ಸವಲತ್ತುಗಳು ಇವರಿಗಿದ್ದರೂ ಇವರು ವಾಸ ಮಾಡುವ ಮನೆಗಳಿಗೆ ಹಕ್ಕುಪತ್ರಗಳನ್ನೇ ನೀಡದಿರುವುದು ವಿಪರ್ಯಾಸ ಸಂಗತಿಯಾಗಿತ್ತು. ಈ ವಿಷಯ ಸರ್ಕಾರದ ಗಮನಕ್ಕೆ ಬಂದು ಇವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದರಿಂದ ಇವರೂ ಕೂಡ ತಮ್ಮ ಮನೆಗಳ ನಿಜವಾದ ಮಾಲೀಕರಾಗುವ ಅವಕಾಶ ಪಡೆದಂತಾಗಿದೆ ಎಂದರು.

    ಯಳಂದೂರು ಪಟ್ಟಣದಲ್ಲಿ 28 ಮಂದಿ ಹಾಗೂ ಕೊಳ್ಳೇಗಾಲದಲ್ಲಿ 990 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಕೊಳ್ಳೇಗಾಲದ ನಂಜಯ್ಯನಕಟ್ಟೆಯಲ್ಲಿ 62 ಪೌರಕಾರ್ಮಿಕ ಕುಟುಂಬಗಳು ಕಳೆದ 40 ವರ್ಷಗಳಿಂದ ವಾಸವಾಗಿವೆ. ಆದರೆ ಇವರಿಗೆ ಹಕ್ಕುಪತ್ರ ನೀಡಲು ನೀರಾವರಿ ಇಲಾಖೆಯು ಇದು ನಮ್ಮ ಜಾಗ ಎಂಬ ತಕರಾರು ಎತ್ತಿದೆ. ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಪರಿಹರಿಸಿ ಇವರಿಗೂ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು. ಇದರೊಂದಿಗೆ ಡಿ ದರ್ಜೆಯ ಎಲ್ಲ ನೌಕರರಿಗೂ ನೇರವಾಗಿ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

    ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ರಾಜಶೇಖರ್, ನಾಮನಿರ್ದೇಶಿತ ಸದಸ್ಯರಾದ ಮಹೇಶ್, ರಘು, ನಿಂಗರಾಜು ಮುಖ್ಯಾಧಿಕಾರಿ ಮಲ್ಲೇಶ್, ಸಮುದಾಯ ಸಂಘಟಕ ಪರಶಿವಮೂರ್ತಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ರಾಮಚಂದ್ರ, ಜೆಇ ಕಿರಣ್ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts