More

    5 ಟಿಪ್ಪರ್ ಲಾರಿಗಳು ವಶ

    ತರೀಕೆರೆ: ರಾಯಧನ ಪಾವತಿಸದೆ ಎಂ.ಸ್ಯಾಂಡ್, ಜಲ್ಲಿಕಲ್ಲು ಸಾಗಿಸುತ್ತಿದ್ದ 5 ಟಿಪ್ಪರ್ ಲಾರಿಗಳನ್ನು ತಹಸೀಲ್ದಾರ್ ವಿ.ಎಸ್.ರಾಜೀವ್ ನೇತೃತ್ವದ ತಂಡ ವಶಕ್ಕೆ ಪಡೆದು ಮಾಲೀಕರಿಂದ ದಂಡ ವಸೂಲಿ ಮಾಡಿದೆ.

    ಮಂಗಳವಾರ ತಡರಾತ್ರಿ ಕಡೂರು ಕಡೆಯಿಂದ ಎಂ.ಸ್ಯಾಂಡ್ ಮತ್ತು ಜಲ್ಲಿಕಲ್ಲು ತುಂಬಿಕೊಂಡು ಪಟ್ಟಣದ ಮೂಲಕ ಬೇಲೇನಹಳ್ಳಿ ಕಡೆ ಹೊರಟಿದ್ದ 5 ಲಾರಿಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳ ತಂಡ ಎಲ್ಲ ಲಾರಿಗಳನ್ನೂ ವಶಕ್ಕೆ ಪಡೆಯಿತು. ಅಕ್ರಮವಾಗಿ ಎಂ.ಸ್ಯಾಂಡ್ ಮತ್ತು ಜಲ್ಲಿಕಲ್ಲು ಸಾಗಿಸುತ್ತಿರುವುದು ಸ್ಪಷ್ಟಪಡಿಸಿಕೊಂಡ ಅಧಿಕಾರಿಗಳು ಲಾರಿ ಮಾಲೀಕರಿಗೆ 58 ಸಾವಿರ ರೂ. ದಂಡ ವಿಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts