ಉತ್ತರಪ್ರದೇಶ: ಉತ್ತರಪ್ರದೇಶದ ಮೀರತ್ನಲ್ಲಿ ಯಾತ್ರೆ ಹೋಗುತ್ತಿದ್ದ ವಾಹನದ ಸ್ಪೀಕರ್ಗೆ ವಿದ್ಯುತ್ ಸ್ಪರ್ಶಿಸಿದ ಕಾರಣ ಐವರು ಕನ್ವಾರಿಯಾಗಳು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 13 ದಿನಗಳ ಕಂದಮ್ಮನ ಮೇಲೆ ಕೋತಿ ದಾಳಿ; ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು
ಘಟನೆಯ ವಿವರ: ಉತ್ತರಪ್ರದೇಶ ಜಿಲ್ಲೆಯ ಭಾವನ್ಪುರ ಪ್ರದೇಶದಲ್ಲಿ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದ ಕನ್ವಾರಿಯಾಗಳು, ಪವಿತ್ರ ಜಲವನ್ನು ಸಂಗ್ರಹಿಸಿ ಹರಿದ್ವಾರದಿಂದ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ. ವಾಹನದ ಸ್ಪೀಕರ್ ಹೈಟೆನ್ಷನ್ ಓವರ್ಹೆಡ್ ತುಗಲಿದ ಕೂಡಲೇ ವಿದ್ಯುತ್ ಸ್ಪರ್ಶಿಸಿ, ಐವರು ಕನ್ವಾರಿಯಾಗಳು ಸಾವನ್ನಪ್ಪಿದ್ದಾರೆ. ಇದರಿಂದ ಕುಪಿತಗೊಂಡ ಸ್ಥಳೀಯರು ರಸ್ತೆ ತಡೆದು, ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಪ್ರತಿಭಟನೆ ನಡೆಸಿದರು,(ಏಜೆನ್ಸೀಸ್).
13 ದಿನಗಳ ಕಂದಮ್ಮನ ಮೇಲೆ ಕೋತಿ ದಾಳಿ; ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು