More

    5.60 ಲಕ್ಷ ರೂ. ಮೌಲ್ಯದ ಅನ್ನಭಾಗ್ಯ ಅಕ್ಕಿ ವಶ

    ನರಗುಂದ: ಅಕ್ರಮವಾಗಿ ಭಾರಿ ಪ್ರಮಾಣದ ಅನ್ನಭಾಗ್ಯದ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ನರಗುಂದ ಪೊಲೀಸರು ಗುರುವಾರ ಪಟ್ಟಣದ ರೋಣ ಕ್ರಾಸ್​ನಲ್ಲಿ ವಶಪಡಿಸಿಕೊಂಡಿದ್ದಾರೆ.
    ಗದಗನಿಂದ ನರಗುಂದ, ವಿಜಯಪುರ, ಸೊಲ್ಲಾಪುರ ಮಾರ್ಗವಾಗಿ ಗುಜರಾತ್​ಗೆ ಸಾಗಿಸುತ್ತಿದ್ದ 5.60 ಲಕ್ಷ ರೂ. ಮೌಲ್ಯದ 50 ಕೆಜಿ ತೂಕದ 496 ಅನ್ನ ಭಾಗ್ಯದ ಅಕ್ಕಿ ಚೀಲಗಳನ್ನು ನರಗುಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
    ರಾಜಸ್ಥಾನದ ಸಾವಗರ ಗ್ರಾಮದ ಲಾರಿ ಚಾಲಕ ರಮೇಶ ಮೋಹನಲಾಲ್​ಜೀ ಆಹಾರಿ, ಡುಂಗರಪುರ ಜಿಲ್ಲೆಯ ಜಾನಿವಾಸ (ದೇವ ಸೋಮನಾಥ) ಗ್ರಾಮದ ಕ್ಲೀನರ್ ದುರ್ಗಾಶಂಕರ ರಾಮ್ೕ ಆಹಾರಿ ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಗುಜರಾತ್ ಮೂಲದ ಲಾರಿ ಸೀಜ್ ಮಾಡಲಾಗಿದೆ.
    ಈ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ವೈ.ಎಸ್. ಏಗನಗೌಡ್ರ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಯ್ಯ ಮಠಪತಿ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅನ್ನಭಾಗ್ಯದ ಅಕ್ಕಿ ವಶಪಡಿಸಿಕೊಂಡಿದ್ದಾರೆ.
    ಆಹಾರ ನಿರೀಕ್ಷಕ ಅನಿಲ ಪವಾರ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಶೆಟ್ಟರ ಸಮ್ಮುಖದಲ್ಲಿ ಪಟ್ಟಣದ (ಎಫ್​ಸಿಐ) ಆಹಾರ ಉಗ್ರಾಣ ನಿಗಮದಲ್ಲಿ ವಶಪಡಿಸಿಕೊಂಡ ಅಕ್ಕಿ ಇರಿಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
    ದಾಳಿಯಲ್ಲಿ ಪ್ರಭಾರ ಸಿಪಿಐ ಬಿ.ಆರ್. ಸೊರಟೂರ, ಕಾನ್​ಸ್ಟೇಬಲ್ ವಿ.ಡಿ. ಕೊಣ್ಣೂರ, ಚಂದ್ರು ಕಾಕನೂರ, ಸುರೇಶ ಚೆಟ್ರಿ, ಡಿ.ಎಂ. ಯಮನೂರ, ವಿ.ಎಸ್. ಹುಲ್ಲೂರ, ಮಂಜು ಬಾರಿಗಿಡದ ಎನ್.ಎಸ್. ಬಾರಕೇರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts