More

    488 ಕೆಜಿ ರಕ್ತ ಚಂದನ ವಶ

    ಬೇತಮಂಗಲ: ಆಂಧ್ರ ಪ್ರದೇಶದ ಚಿತ್ತೂರಿನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ರಕ್ತ ಚಂದನದ ತುಂಡುಗಳನ್ನು ಬೇತಮಂಗಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಭಾನುವಾರ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಆಂಧ್ರ ಗಡಿ ದಾಟಿ ಕರ್ನಾಟಕ ಪ್ರವೇಶಿಸಿದ ಕಾರನ್ನು (ಕೆ.ಎ.05-ಎ.ಬಿ.0256) ಬೇತಮಂಗಲ ಬಸ್ ನಿಲ್ದಾಣದ ಬಳಿ ಪರಿಶೀಲಿಸಿದಾಗ 15 ತುಂಡುಗಳು ಕಂಡು ಬಂದಿದ್ದು, ಪ್ರಭಾರ ಪಿಎಸ್‌ಐ ಜಯರಾಮರೆಡ್ಡಿ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಚಾಲಕ ಸೇರಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಒಬ್ಬ ಸಿಕ್ಕಿಬಿದ್ದಿದ್ದಾನೆ. ಒಟ್ಟು 488 ಕೆಜಿ ತೂಕವಿದ್ದು, ಸುಮಾರು 10 ಲಕ್ಷ ರೂ. ಮೌಲ್ಯ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ತಮಿಳುನಾಡಿನ ಸ್ವಾಮಿನಾಥನ್ (22) ಎಂದು ಗುರುತಿಸಲಾಗಿದ್ದು, ಉಳಿದವರನ್ನು ಹಿಡಿಯಲು ಪೊಲೀಸರ ತಂಡ ತಮಿಳುನಾಡಿಗೆ ತೆರಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts