More

    42 ಲಕ್ಷ ರೂ.ವೆಚ್ಚದಲ್ಲಿ 3 ಕೊಠಡಿ ನಿರ್ಮಾಣ

    ರಾಯಬಾಗ: ಮತಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಿಸಿಕೊಡಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

    ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ವಿವೇಕ ಯೋಜನೆಯಡಿ 14 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ 1 ಕೊಠಡಿ ಹಾಗೂ ಮುರಗುಬಾಯಿ ತೋಟದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 28 ಲಕ್ಷ ರೂ.ಅನುದಾನದಲ್ಲಿ ನಿರ್ಮಿಸಿದ 2 ಕೊಠಡಿ ಉದ್ಘಾಟಿಸಿ ಮಾತನಾಡಿದರು.

    ಬಿಇಒ ಬಸವರಾಜಪ್ಪ ಆರ್., ಚಿಂಚಲಿ ಪಪಂ ಮುಖ್ಯಾಧಿಕಾರಿ ವೆಂಕಟೇಶ ಬಳ್ಳಾರಿ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಪಡೋಳಕರ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ, ಅಂಕುಶ ಜಾಧವ, ರಮೇಶ ಹಾರೂಗೇರಿ, ಕುಮಾರ ಖೋತ, ಲಕ್ಷ್ಮಣ ತುಳಸಿಗೇರಿ, ಅಜೀತ ಈರಗಾರ, ಬಾಹುಬಲಿ ಹಂಡಗೆ, ಕರೆಪ್ಪ ಹಾರೂಗೇರಿ, ಎ.ವೈ.ಕಾಂಬಳೆ, ಲಕ್ಷ್ಮಣ ನಾವಿ, ಸಿ.ಎಸ್.ಕಾಂಬಳೆ, ಎಸ್.ಆರ್.ಕಂಬಾರ, ಎಚ್.ಬಿ.ಬೆನ್ನಾಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts