More

    ಪುನೀತ್ ಅವರ 40ಕ್ಕೂ ಹೆಚ್ಚು ಅಭಿಮಾನಿಗಳಿಂದ ನೇತ್ರದಾನ ನಿರ್ಧಾರ; 11ನೇ ದಿನದ ಪುಣ್ಯಸ್ಮರಣೆಯಂದೇ ಹೆಸರು ನೋಂದಣಿ

    ಗದಗ: ಪುನೀತ್ ರಾಜಕುಮಾರ್​ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದೇ ಹಾದಿಯಲ್ಲಿ ಸಾಗಿರುವ ಇಲ್ಲೊಂದಷ್ಟು ಅಭಿಮಾನಿಗಳು ನೇತ್ರದಾನದ ನಿರ್ಧಾರ ತಳೆದಿದ್ದು ಹೆಸರು ಕೂಡ ನೋಂದಾಯಿಸಿಕೊಂಡಿದ್ದಾರೆ.

    ಗದಗ ಜಿಲ್ಲೆಯ ಗಜೇಂದ್ರಗಡ ತಾಂಡಾದ ಯುವಕರು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ. ಪುನೀತ್ ರಾಜಕುಮಾರ್ ಅಗಲಿಕೆಯ 11ನೇ ದಿನದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಆಯೋಜಿಸಿದ ಈ ಅಭಿಮಾನಿಗಳು ಇದೇ ಸಂದರ್ಭದಲ್ಲಿ ನೇತ್ರದಾನದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಅಂದು ಸರ್ಕಾರಿ ಕಚೇರಿಯಲ್ಲಿ ತಲವಾರ್ ಬೀಸಿ ಬೆದರಿಸಿದ್ದ; ಇಂದು ಬದುಕಿಗೆ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ..

    ಗಜೇಂದ್ರಗಡ ತಾಂಡಾದ ಬಂಜಾರಾ ಸಮುದಾಯದ 40ಕ್ಕೂ ಅಧಿಕ ಮಂದಿ ನೇತ್ರದಾನಕ್ಕೆ ಮುಂದಾಗಿದ್ದು, ಇಂದು ಇಲ್ಲಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಳಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ದಾನಿಗಳಲ್ಲಿ ಯುವಕರು ಮಾತ್ರವಲ್ಲದೆ ಮಹಿಳೆಯರೂ ಇರುವುದು ವಿಶೇಷ.

    ನೆರೆದವರ ಮನದಲ್ಲಿ ‘ಹೆಜ್ಜೆಗುರುತು’ ಮೂಡಿಸಿದ ಹರೇಕಳ ಹಾಜಬ್ಬ; ಪದ್ಮಶ್ರೀ ಸ್ವೀಕರಿಸಿದ ಆ ಮುಗ್ಧ-ಭಾವುಕ ಕ್ಷಣ..

    ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರ ಪೈಕಿ ನಾಲ್ವರ ಸಾವು; ಇನ್ನೊಬ್ಬರದು ಐಸಿಯುನಲ್ಲಿ ಜೀವನ್ಮರಣ ಹೋರಾಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts