ಉಡುಪಿ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಜ್ರಾಭರಣ ಕಳವಾಗಿದ್ದು, ಆಭರಣ ಕಳೆದುಕೊಂಡ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಹಾರಾಷ್ಟ್ರ ಮುಲುಂದು ವೈಶಾಲಿ ನಗರದ ದೀಪಾ ರೈ(44) ಡಿ.5ರಂದು ಕಟಪಾಡಿಗೆ ಬರಲು ಮುಂಬೈನ ಪನ್ ವೇಲಿನಿಂದ ಮತ್ಸ್ಯಗಂಧ ರೈಲು ಹತ್ತಿದ್ದರು. ಡಿ.6ರ ಮುಂಜಾನೆ 5.40ಕ್ಕೆ ಉಡುಪಿ ರೈಲ್ವೆ ಸ್ಟೇಷನ್ಗೆ ಬಂದಿರು. ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್ನಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಡೈಮಂಡ್ ಆಭರಣ ಕಳವಾಗಿರುವುದು ಗೊತ್ತಾಗಿದೆ.
ಅಂದಾಜು 850 ಗ್ರಾಂ ತೂಕದ 34 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6 ಲಕ್ಷ ರೂ. ಮೌಲ್ಯದ ವಜ್ರಾಭರಣ ಕಳವಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.
ಕಲಬುರಗಿಯಲ್ಲಿ ಭೀಕರ ಅಪಘಾತ: ಸರ್ಕಲ್ ಇನ್ಸ್ಪೆಕ್ಟರ್ ರವಿ ಉಕ್ಕುಂದ, ಪತ್ನಿ ದುರ್ಮರಣ
ತುಮಕೂರಲ್ಲಿ ‘ನಾರಾಯಣ ದೇವಾಲಯ’ ಉದ್ಘಾಟನೆ: ಇದು ಕ್ಯಾಷ್ ಕೌಂಟರ್ ಇಲ್ಲದ ಮೊದಲ ಆಸ್ಪತ್ರೆ