More

    ಒಂದೇ ವೇದಿಕೆಯಲ್ಲಿ 4 ಸೂಪರ್ ಸ್ಟಾರ್​ಗಳು ಸೇರಲಿದ್ದಾರೆ! ಎಲ್ಲಿ? ಯಾವುದು ಆ ಸಿನಿಮಾ?

    ಹೈದರಾಬಾದ್: ಟಾಲಿವುಡ್ ನಲ್ಲಿ ಸದ್ಯ ಎರಡು ಸಿನಿಮಾಗಳದ್ದೆ ಹವಾ. ಒಂದು ಅಖಂಡಮತ್ತು ಇನ್ನೊಂದು ಪುಷ್ಟ‘. ಆದರೆ, ಡಿ.6 ರಂದು ಪುಷ್ಟಟ್ರೈಲರ್ ಬಿಡುಗೆಡಯಾಗಿದ್ದು, ಎಲ್ಲರ ಮನೆ ಮಾತಾಗಿದೆ. ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ರಿಲೀಸ್ ಆದ 27 ಗಂಟೆಗಳಲ್ಲಿ 5 ಭಾಷೆಗಳಲ್ಲಿ ಒಟ್ಟು 30 ಮಿಲಿಯನ್ ವೀಕ್ಷಣೆಗಳನ್ನು ಟ್ರೈಲರ್ ಪಡೆದಿದೆ. ಟ್ರೈಲರ್ ನಲ್ಲಿರುವ ಪುಷ್ಪ, ಅಂದ್ರೆ ಹೂವು ಅಂದ್ಕೊಂಡಿದ್ದೀರಾಬೆಂಕಿಎಂಬ ಡೈಲಾಗ್ ಅಂತೂ ನಟ ಅಲ್ಲು ಅರ್ಜುನ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಸಣ್ಣ ಮಕ್ಕಳ ಬಾಯಲ್ಲೂ ಇದೇ ಪಂಚ್ ಡೈಲಾಗ್ ಕೇಳಿಬರುತ್ತಿದೆ. ಇಂತಹ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮಕ್ಕೆಂದು ಟಾಲಿವುಡ್ ಮತ್ತು ಬಾಲಿವುಡ್ ಸೇರಿ ನಾಲ್ಕು ಸೂಪರ್ ಸ್ಟಾರ್ ನಟರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
    ಹಾಗಾದರೆ, ಸೂಪರ್ ಸ್ಟಾರ್​ಗಳು ಯಾರು ಅಂತೀರಾ? ಬಾಲಕೃಷ್ಣ ಅವರ ಅಖಂಡಸಿನಿಮಾ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ನಟ ಅಲ್ಲು ಅರ್ಜುನ್ ಹೋಗಿದ್ದು ನಮಗೆಲ್ಲರಿಗೂ ತಿಳಿದಿದೆ. ಹೀಗಾಗಿ, ‘ಪುಷ್ಟಸಿನಿಮಾಗೆ ಶುಭ ಹಾರೈಸಲು ನಟ ನಂದಮೂರಿ ಬಾಲಕೃಷ್ಣ ಅವರು ಸಹ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಜೊತೆಗೆ, ಅಲ್ಲು ಅರ್ಜುನ್ ಗೆ ಬೆಂಬಲ ನೀಡಲು ಮೆಗಾ ಸ್ಟಾರ್ ಚಿರಂಜೀವಿ ಮತ್ತು ಡಾರ್ಲಿಂಗ್ ಪ್ರಭಾಸ್ ಸಹ ಪುಷ್ಟಸಿನಿಮಾ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಿಷ್ಟೆ ಅಲ್ಲದೇ, ಮೂರಕ್ಕೂ ಹೆಚ್ಚು ಸೌತ್ ಸಿನಿಮಾಗಳನ್ನು ಬಾಲಿವುಡ್​​ಗೆ ರೀಮೇಕ್ ಮಾಡಿರುವ ಮತ್ತು ಸೌತ್ ಸಿನಿರಂಗದವರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವ ನಟ ಶಾಹಿದ್ ಕಪೂರ್ ಕೂಡ ಸ್ಟೈಲಿಶ್ ಸ್ಟಾರ್ ಅಲ್ಲುಗೆ ಸಾತ್ ನೀಡಲಿದ್ದಾರೆ.

    ಒಂದೇ ವೇದಿಕೆಯಲ್ಲಿ 4 ಸೂಪರ್ ಸ್ಟಾರ್​ಗಳು ಸೇರಲಿದ್ದಾರೆ! ಎಲ್ಲಿ? ಯಾವುದು ಆ ಸಿನಿಮಾ? ಒಂದೇ ವೇದಿಕೆಯಲ್ಲಿ 4 ಸೂಪರ್ ಸ್ಟಾರ್​ಗಳು ಸೇರಲಿದ್ದಾರೆ! ಎಲ್ಲಿ? ಯಾವುದು ಆ ಸಿನಿಮಾ?

    ಅದ್ಧೂರಿ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆಯಲಿದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ. ಇತ್ತೀಚೆಗೆ, ಸ್ಟಾರ್ ನಟರು ತಮ್ಮ ಸ್ನೇಹಿತರು ಮತ್ತು ಸಹನಟರ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೆಂಬಲ ನೀಡುವುದು ಸಹಜವಾಗಿದೆ. ‘ಆರ್​ಆರ್​ಆರ್ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಿವುಡ್​​ನ ಭಾಯ್ ಸಲ್ಮಾನ್ ಖಾನ್ ಭಾಗವಹಿಸಲಿದ್ದಾರೆ. ಹೀಗೆ, ಹಲವಾರು ದೊಡ್ಡ ಬಜೆಟ್ ಸಿನಿಮಾಗಳ ಪ್ರಚಾರಕ್ಕೆ ದೊಡ್ಡ ದೊಡ್ಡ ಸ್ಟಾರ್ ನಟರು ಭಾಗವಹಿಸಿ ಶುಭ ಹಾರೈಸುತ್ತಾರೆ. ಹಾಗೆಯೇ, ಎಲ್ಲಾ ಅಂದುಕೊಂಡಂಗೆ ನಡೆದರೆ, ‘ಪುಷ್ಟಸಿನಿಮಾಗೆ ಶುಭ ಹಾರೈಸಲು ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಜೊತೆ ನಾಲ್ಕು ಸೂಪರ್ ಸ್ಟಾರ್​​ಗಳು ವೇದಿಕೆ ಹಂಚಿಕೊಳ್ಳಲಿದ್ದಾರೆ.

    ಒಂದೇ ವೇದಿಕೆಯಲ್ಲಿ 4 ಸೂಪರ್ ಸ್ಟಾರ್​ಗಳು ಸೇರಲಿದ್ದಾರೆ! ಎಲ್ಲಿ? ಯಾವುದು ಆ ಸಿನಿಮಾ?

    ಅಂದಹಾಗೆ, ‘ಪುಷ್ಟಭಾಗ1′ ಚಿತ್ರ ಡಿ.17 ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ. ಹಾಗಾಗಿ, ಚಿತ್ರತಂಡ ಹಲವಾರು ಪ್ರೀರಿಲೀಸ್ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಮೊದಲು ಹೈದರಾಬಾದ್​ನಲ್ಲಿ ಪ್ರೀರಿಲೀಸ್ ಕಾರ್ಯಕ್ರಮ ಮುಗಿಸಿದ ನಂತರ ಪುಷ್ಟಚಿತ್ರತಂಡ, ಸಿನಿಮಾ ಬಿಡುಗಡೆಯಾಗುತ್ತಿರುವ ಬೇರೆ 4 ಭಾಷೆಗಳ ರಾಜ್ಯಗಳಿಗೆ ಹೋಗಿ ತಮ್ಮ ಸಿನಿಮಾವನ್ನು ಪ್ರಮೋಟ್ ಮಾಡಿಕೊಳ್ಳಲಿದ್ದಾರೆ. ಮುಂಬೈ, ಬೆಂಗಳೂರು, ಚೆನೈ, ತಿರುವನಂತಪುರಂ ನಗರಗಳಿಗೆ ತೆರಳಿ ಇಡೀ ಚಿತ್ರತಂಡ ಅಭಿಮಾನಿಗಳನ್ನು ಪುಷ್ಟಸಿನಿಮಾ ನೋಡಲು ವಿನಂತಿಸಲಿದ್ದಾರೆ. ಸಿನಿಮಾದ ಟ್ರೈಲರ್, ಹಾಡುಗಳು ಈಗಾಗಲೇ ಹಿಟ್ ಎಂದು ಹೇಳಲಾಗುತ್ತಿದ್ದು, ಚಿತ್ರ ಸಹ ಎಲ್ಲರ ಮನಗೆಲ್ಲುವಲ್ಲಿ ಸಂಶಯವಿಲ್ಲ ಎಂದು ಸಿನಿಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ.

    ಪ್ರವಾಹಪೀಡಿತರಿಗಾಗಿ ಡಾರ್ಲಿಂಗ್ ಪ್ರಭಾಸ್ ನೀಡಿದ ದೇಣಿಗೆ ಎಷ್ಟು ಕೋಟಿ ಗೊತ್ತಾ? ಟಾಲಿವುಡ್​ನಲ್ಲೇ ಅತಿ ಹೆಚ್ಚು!

    ‘ಮೊಬೈಲ್​ ರೂಮಲ್ಲೇ ಬಿಟ್ಟು ಬನ್ನಿ’ – ಅತಿಥಿಗಳಿಗೆ ವಿಕಿ-ಕತ್ರೀನಾ ಓಲೆ! ಅಭಿಮಾನಿಗಳಿಗೆ ಒಟಿಟಿಯಲ್ಲಿ ಮದುವೆ ದೃಶ್ಯಾವಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts