ಕೌಶಂಬಿ: ಯಮುನಾ ನದಿಯಿಂದ ಅಕ್ರಮವಾಗಿ ಡಾಲ್ಫಿನ್ನ್ನು ಹಿಡಿದು ತಿಂದ ಆರೋಪದಡಿ ಓರ್ವನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ: ಸಾಂಪ್ರದಾಯಿಕವಾಗಿ ಸಾಕ್ಷಾತ್ ಶಿವನನ್ನೇ ಮದುವೆಯಾದ ಯುವತಿ: ಕುಟುಂಬಸ್ಥರಿಂದ ಸಾಥ್..!
ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಸೋಮವಾರದಂದು ಚೈಲ್ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಈ ಕುರಿತು ದೂರನ್ನು ನೀಡಿದ್ದರು. ಇದರ ಆಧಾರದ ಮೇಲೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಂಜೀತ್ ಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ನಸೀರ್ಪುರ ಗ್ರಾಮದ ನಾಲ್ವರು ಮೀನುಗಾರರು ಜುಲೈ 22ರಂದು ಬೆಳಿಗ್ಗೆ ಯಮುನಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಯಲ್ಲಿ ಡಾಲ್ಫಿನ್ ಸಿಕ್ಕಿಬಿದ್ದಿದ್ದು, ಕೂಡಲೇ ಅವರು ನದಿಯಿಂದ ಡಾಲ್ಫಿನ್ನ್ನು ತಮ್ಮ ಭುಜದ ಮೇಲೆ ಮನೆಗೆ ಸಾಗಿಸಿ ಮನೆಯಲ್ಲಿ ಅದನ್ನು ಬೇಯಿಸಿ ತಿಂದಿದ್ದಾರೆ ಪಿಪ್ರಿ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ಧಾರೆ.
ಕೆಲವು ದಾರಿಹೋಕರು ಮೀನುಗಾರರು ಡಾಲ್ಫಿನ್ನ್ನು ಸಾಗಿಸುತ್ತಿರುವಾಗ ವೇಳೆ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್)