ಬೆಂಗಳೂರು: ಹೊಸ ವರ್ಷಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 37 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, 46 ಐಎಎಸ್ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಶನಿವಾರ (ಡಿ.30) ಆದೇಶ ಹೊರಡಿಸಿದೆ. ಕೆಲವು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.
* ಕಮಲ್ ಪಂತ್: ಡಿಜಿಪಿ, ನೇಮಕಾತಿ ವಿಭಾಗ
* ಅಲೋಕ್ ಕುಮಾರ್: ವಿಶೇಷ ಆಯುಕ್ತ, ರಸ್ತೆ ಸುರಕ್ಷತಾ ವಿಭಾಗ
* ಸೀಮಂತ್ ಕುಮಾರ್ ಸಿಂಗ್: ಎಡಿಜಿಪಿ, ಬಿಎಂಟಿಎಫ್
* ಹರಿಶೇಖರನ್: ಎಡಿಜಿಪಿ, ಹೋಂ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್
* ನಂಜುಂಡಸ್ವಾಮಿ: ಎಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆ
* ಚಂದ್ರಗುಪ್ತ: ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಸಿಸಿಬಿ
* ತ್ಯಾಗರಾಜನ್: ಐಜಿಪಿ, ಪೂರ್ವ ವಲಯ
* ಅಮಿತ್ ಸಿಂಗ್ : ಐಜಿಪಿ, ಪಶ್ಚಿಮ ವಲಯ
* ವೈ. ಎಸ್. ರವಿಕುಮಾರ್: ಡಿಐಜಿ, ಗುಪ್ತಚರ ಇಲಾಖೆ
* ಶಾಂತನೂ ಸಿನ್ಹಾ: ಪೊಲೀಸ್ ಉಪ ಮಹಾನಿರೀಕ್ಷಕರು
* ದಿವ್ಯಾ ವಿ.ಗೋಪಿನಾಥ್: ಪೊಲೀಸ್ ಉಪ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ
* ಸುಧೀರ್ ಕುಮಾರ್ ರೆಡ್ಡಿ: ಪೊಲೀಸ್ ಜನರಲ್, ಅರಣ್ಯ ಕೋಶ, ಅಪರಾಧ ತನಿಖಾ ಇಲಾಖೆ
* ಆರ್ ಚೇತನ್: ಪೊಲೀಸ್ ಜನರಲ್ ಮತ್ತು ಕಮಿಷನರ್ ಆಫ್ ಪೊಲೀಸ್, ಕಲಬುರಗಿ ನಗರ
* ವರ್ತಿಕಾ ಕಟಿಯಾರ್: ಪೊಲೀಸ್ ಜನರಲ್, ಆಂತರಿಕ ಭದ್ರತಾ ವಿಭಾಗ ಬೆಂಗಳೂರು
ಇನ್ನುಷ್ಟು ಮಾಹಿತಿ ಅಪ್ಡೇಟ್ ಮಾಡಲಾಗುವುದು….