ಜೈಪುರ: ಸೇನಾ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಯೋಧರು ಹುತಾತ್ಮರಾಗಿರುವ ಘಟನೆ ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ನಡೆದಿದ್ದು, ಅವಗಢದಲ್ಲಿ ಇತರೆ ಐವರು ಯೋಧರು ಸಹ ಗಾಯಗೊಂಡಿದ್ದಾರೆ.
ಗುರುವಾರ ಮುಂಜಾನೆ ಗಂಗಾನಗರದ ರಾಜಿಯಾಸರ್ ಏರಿಯಾದಲ್ಲಿ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಪ್ಸಿ ವಾಹನ ಉರುಳಿಬಿದ್ದು ಬೆಂಕಿ ಹೊತ್ತಿಕೊಂಡಿತು. ಗಾಯಗೊಂಡ ಐವರು ಯೋಧರು ವಾಹನದಿಂದ ಹೊರಬಂದರು. ಆದರೆ, ಮೂವರು ಅಲ್ಲಿಯೇ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಸ್ಒ) ವಿಕ್ರಮ್ ತಿವಾರಿ ಹೇಳಿದ್ದಾರೆ.
ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಎಚ್ಒ ತಿಳಿಸಿದರು. (ಏಜೆನ್ಸೀಸ್)
ಈಕೆ ಪುರುಷರ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಿಲ್ಲ: ಈಕೆಯ ವಿಚಿತ್ರ ಕಾಯಿಲೆ ಬಗ್ಗೆ ತಿಳಿದ್ರೆ ದಂಗಾಗ್ತಿರಾ!
ಕಾಮುಕ ತಂದೆಯನ್ನು ಬರ್ಬರವಾಗಿ ಕೊಂದಿದ್ದ ಸಹೋದರಿಯರಿಗೆ ಗುಡ್ ನ್ಯೂಸ್ ಕೊಟ್ಟ ನ್ಯಾಯಾಲಯ!