ನವದೆಹಲಿ: ಕೆಲಸ ಕಳೆದುಕೊಂಡ ಮೂವರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದಿದ್ದಾರೆ.
ದೆಹಲಿಯಲ್ಲಿ ಘಟನೆ ನಡೆದಿದೆ. ಈ ಮೂವರು ಲಾಕ್ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಕೈಲಿದ್ದ ಹಣವೂ ಖಾಲಿಯಾಗಿತ್ತು. ಇದರಿಂದ ಮುಂದೇನು ಮಾಡಬೇಕೆಂದು ತೋಚದೆ ಪೊಲೀಸರಂತೆ ಸೋಗು ಹಾಕಿಕೊಂಡರು. ನಂತರ ಅಪರಿಚಿತರನ್ನು ಕಿಡ್ನ್ಯಾಪ್ ಮಾಡಿ, ಅವರ ಕುಟುಂಬದಿಂದ ಹಣ ಕೀಳುವ ಪ್ರಯತ್ನ ಮಾಡಿದರು. ಆದರೆ ಅವರ ಮೊದಲ ಪ್ರಯತ್ನ ವಿಫಲವಾಯಿತು..ಹಣವೂ ಸಿಗಲಿಲ್ಲ…ಇವರು ನಿಜವಾದ ಪೊಲೀಸರ ಬಳಿ ಸಿಕ್ಕಿಬಿದ್ದರು.
ಸ್ವಪ್ನಿಲ್, ರವಿಶರ್ಮಾ ಮತ್ತು ಕೇಶವ್ ಸೆಹಗಲ್ ಎಂಬ ಮೂವರು ಸ್ನೇಹಿತರು ಪೊಲೀಸ್ ಡ್ರೆಸ್ ಹಾಕಿಕೊಂಡು, ವಾಕಿಟಾಕಿಯನ್ನೆಲ್ಲ ಇಟ್ಟುಕೊಂಡು ಪಕ್ಕಾ ಪೊಲೀಸರಂತೆ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದವರಂತೆ ಪೋಸ್ ಕೊಡುತ್ತಿದ್ದರು.
ಹಾಗೇ ವೆರ್ನಾ ಕಾರಿನಲ್ಲಿ ಬಂದ ಮಂದೀಪ್ ಮತ್ತು ಜಗದೀಪ್ ಎಂಬುವರನ್ನು ಚೆಕಿಂಗ್ ಮಾಡುವ ನೆಪದಲ್ಲಿ ತಡೆದ ಆರೋಪಿಗಳು, ನಂತರ ಅವರನ್ನು ಅಪಹರಿಸಿದ್ದಾರೆ. ಕಾರನ್ನು ನೋಡಿ, ಇವರು ಶ್ರೀಮಂತರೇ ಇರಬಹುದು ಎಂದು ಅಪಹರಣ ಮಾಡಿದರು. ಇದೆಲ್ಲ ನಡೆದಿದ್ದು ನಜಾಫ್ಗಡ್ ಬಳಿ.
ಹಾಗೇ ನಜಾಫ್ಗಡ್ ಬಳಿ ಇಬ್ಬರು ಕಾಣೆಯಾಗಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲನೆ ಮಾಡಿದ್ದಾರೆ. ಆಗ ಈ ಮೂವರೂ ಕಾರನ್ನು ನಿಲ್ಲಿಸಿದ್ದು, ನಂತರ ಅಪಹರಣ ಮಾಡಿದ್ದು ಗೊತ್ತಾಗಿದೆ. ತನಿಖೆಯ ನಂತರ ಸತ್ಯ ಬೆಳಕಿಗೆ ಬಂದಿದೆ. ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. (ಏಜೆನ್ಸೀಸ್)
ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್ನೊಂದಿಗೆ ನೇರ ಸಂಪರ್ಕ